ನವದೆಹಲಿ : ಭಾರತದ ವೀರ ಸ್ವಾತಂತ್ರ್ಯ ಸೇನಾನಿಗಳಾದ ಭಗತ್, ರಾಜ್ಗುರು ಮತ್ತು ಸುಖ್ದೇವ್ ಅವರು ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ದಿನ ಇಂದು. ಮಾರ್ಚ್ 23 ರಂದು ದೇಶದಾದ್ಯಂತ ಬಲಿದಾನ ದಿವಸ್ ಆಗಿ ಆಚರಣೆ ಮಾಡಲಾಗುತ್ತದೆ. ಬಲಿದಾನ ದಿವಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂರು ತ್ರಿವಳಿ ರತ್ನಗಳ ತ್ಯಾಗವನ್ನು ಟ್ವಿಟ್ಟರ್ನಲ್ಲಿ ವಿಡೀಯೋ ಪೋಸ್ಟ್ ಮೂಲಕ ಸ್ಮರಿಸಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಮೋದಿ ಅವರು, “ಸ್ವಾತಂತ್ರ್ಯದ ಅಮರ ಸೇನಾನಿಗಳಾದ ವೀರ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಬಲಿದಾನ ದಿವಸದ ಅಂಗವಾಗಿ ಶತಶತ ನಮನಗಳು. ಭಾರತಮಾತೆಯ ಈ ಪರಾಕ್ರಮಿ ಸುಪುತ್ರರ ತ್ಯಾಗ ಸಂಘರ್ಷ ಮತ್ತು ಆದರ್ಶಗಳ ಕಥೆ ಈ ದೇಶಕ್ಕೆ ಯಾವಾಗಲೂ ಪ್ರೇರಣೆಯಾಗಿರುತ್ತದೆ ಜೈಹಿಂದ್ ಎಂದಿದ್ದಾರೆ.
आजादी के अमर सेनानी वीर भगत सिंह, सुखदेव और राजगुरु को शहीद दिवस पर शत-शत नमन। भारत माता के इन पराक्रमी सपूतों के त्याग, संघर्ष और आदर्श की कहानी इस देश को हमेशा प्रेरित करती रहेगी। जय हिंद! pic.twitter.com/IpdJqjhR9q
— Chowkidar Narendra Modi (@narendramodi) March 23, 2019
1931ರ ಮಾರ್ಚ್ 23 ರಂದು ಬ್ರಿಟಿಷರು ಲಾಹೋರ್ ಜೈಲಿನಲ್ಲಿ ಭಾರತದ ಈ ಮೂರು ವೀರರನ್ನು ನೇಣುಗಂಬಕ್ಕೆ ಏರಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.