ನವದೆಹಲಿ: ಭಯೋತ್ಪಾದನಾ ದಾಳಿಗಳಿಗೆ ಪಾಕಿಸ್ಥಾನವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ, ವೈಮಾನಿಕ ದಾಳಿಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೊಡ್ನನ್ನು, ಇಂದು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಮ್ಮ ಯೋಧರಿಗೆ ಅವಮಾನ ಮಾಡುವುದು ಭಯೋತ್ಪಾದಕರ ಬಗ್ಗೆ ಅನುಕಂಪ ಹೊಂದಿರುವುವವರ ಸ್ವಾಭಾವಿಕ ಹವ್ಯಾಸ’ ಎಂದು ಜರೆದಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ‘ಕಾಂಗ್ರೆಸ್ ಅಧ್ಯಕ್ಷರ ಅತ್ಯಂತ ಆಪ್ತ ಸಲಹೆಗಾರ, ನಂಬಿಕಸ್ಥ ವ್ಯಕ್ತಿ ಪಾಕಿಸ್ಥಾನ ನ್ಯಾಷನಲ್ ಡೇ ಅನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಈಗಾಗಲೇ ಆರಂಭಿಸಿದ್ದಾರೆ, ಅದು ಕೂಡ ಭಾರತೀಯ ಶಸ್ತ್ರಾಸ್ತ್ರ ಪಡೆಗಳನ್ನು ಅವಮಾನಿಸುವ ಮೂಲಕ ಇದನ್ನು ಅವರು ಆರಂಭಿಸಿದ್ದು ದುರಾದೃಷ್ಟಕರ’ ಎಂದಿದ್ದಾರೆ.
ಸ್ಯಾಮ್ ಪಿತ್ರೊಡ ಅವರು, ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಮುಖ್ಯಸ್ಥರಾಗಿದ್ದಾರೆ ಮತ್ತು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯಲ್ಲೂ ಅವರಿದ್ದಾರೆ. ಬಾಲಕೋಟ್ ನಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರರು ಸತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ನೀಡಿ ಎಂದು ಇವರು ಸರ್ಕಾರವನ್ನು ಕೇಳಿದ್ದಾರೆ. ಅಲ್ಲದೇ, ದಾಳಿ ನಡೆಸಿದ್ದೇ ತಪ್ಪು ಎಂದು ಪ್ರತಿಪಾದಿಸಿದ್ದಾರೆ. ಪಾಕಿಸ್ಥಾನವನ್ನು ಭಯೋತ್ಪಾದನಾ ದಾಳಿಗೆ ಹೊಣೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
Loyal courtier of Congress’ royal dynasty admits what the nation already knew- Congress was unwilling to respond to forces of terror.
This is a New India- we will answer terrorists in a language they understand and with interest! https://t.co/Mul4LIbKb5
— Chowkidar Narendra Modi (@narendramodi) March 22, 2019
ಪಿತ್ರೊಡ ಮಾತನ್ನು ಬಿಜೆಪಿ ಬಲವಾಗಿ ಖಂಡಿಸಿದ್ದು, ಭಾರತೀಯರು ನಿಮ್ಮನ್ನು ಕ್ಷಮಿಸುವುದಿಲ್ಲ (#JantaMaafNahiKaregi) ಎಂಬ ಹ್ಯಾಶ್ ಟ್ಯಾಗ್ ಅನ್ನು ಟ್ರೆಂಡ್ ಮಾಡಿದೆ.
ಜೇಟ್ಲಿ ಅವರು ಮಾತನಾಡಿ, ‘ಜಗತ್ತಿನ ಯಾವ ರಾಷ್ಟ್ರವೂ ವೈಮಾನಿಕ ದಾಳಿಯನ್ನು ತಪ್ಪು ಎಂದಿಲ್ಲ. ಕೇವಲ ಪಾಕಿಸ್ಥಾನವಷ್ಟೇ ಇದನ್ನು ವಿರೋಧಿಸಿತ್ತು. ಆದರೆ ಇಂತಹ ಮನಸ್ಥಿತಿಯ ಜನರು ರಾಜಕೀಯ ಪಕ್ಷವೊಂದರ ಮುಖಂಡರಾಗಿರವುದು ನಿಜಕ್ಕೂ ಖೇದಕರ. ಗುರುವಿನಂತೆಯೇ ಶಿಷ್ಯ ಕೂಡ ವರ್ತಿಸುತ್ತಿದ್ದಾನೆ’ ಎಂದು ಪಿತ್ರೊಡ ಹಾಗೂ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.