ನವದೆಹಲಿ: ಚಂಡಮಾರುತ ‘IDAI’ನಿಂದ ಸಂಕಷ್ಟಕ್ಕೀಡಾಗಿರುವ ಮೊಂಜಾಬಿಕ್ಗೆ ಭಾರತ ನೆರವಿನ ಹಸ್ತ ಚಾಚಿದೆ. ಹಿಂದೂ ಮಹಾ ಸಾಗರದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಭಾರತೀಯ ನೌಕಾಸೇನೆಯ ಮೊದಲ ತರಬೇತಿ ಸ್ಕ್ವಾಡ್ರನ್ಗಳಾದ ಸುಜಾತ, ಸಾರಥಿ, ಶಾರ್ದೂಲ್ ಅನ್ನು ಪೋರ್ಟ್ ಬೀರ್ನತ್ತ ಕೊಂಡೊಯ್ಯಲಾಗಿದೆ. ಮೊಜಾಂಬಿಕ್ ಜನರಿಗೆ ಮಾನವೀಯ ನೆರವು ನೀಡುವಂತೆ ಬಂದ ಮನವಿಯನ್ನು ಮನ್ನಿಸಿ ಭಾರತೀಯ ನೌಕೆ ಅಲ್ಲಿಗೆ ಧಾವಿಸಿದೆ.
ಐಎನ್ ಶಿಪ್ಗಳ ಮೂಲಕ ಭಾರತೀಯ ನೌಕಾದಳವು ಜನರ ಸುರಕ್ಷಿತ ರಕ್ಷಣೆಯಲ್ಲಿ ಸ್ಥಳಿಯ ಆಡಳಿತದೊಂದಿಗೆ ಕೈಜೋಡಿಸಿ ಸಹಾಯಹಸ್ತವನ್ನು ನೀಡುತ್ತಿದೆ. ಮೊಂಜಾಬಿಕ್ನ ರಕ್ಷಣಾ ಸಚಿವರು ನೌಕಾ ಶಿಪ್ಗಳಿಗೆ ಭೇಟಿಯನ್ನು ನೀಡಿ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮಾನವೀಯ ನೆರವು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತದ ನೌಕಾ ಹಡಗುಗಳು ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಭಾರತೀಯ ನೌಕೆ ಸುಜಾತದ ಕ್ಯಾ.ವರುಣ್ ಸಿಂಗ್ ಮೊಂಜಾಬಿಕ್ ನೌಕೆಗೆ ಭರವಸೆಯನ್ನು ನೀಡಿದ್ದಾರೆ.
Indian Navy – first Responder to Cyclone ‘IDAI’ in Mozambiqu….. https://t.co/4wjbi0AWwT pic.twitter.com/TcdTrhZd9X
— SpokespersonNavy (@indiannavy) March 20, 2019
ಐಎನ್ ಶಾರ್ದೂಲ್ನಿಂದ ಬಂದ ಹೆಲಿಕಾಫ್ಟರ್ಗಳು ಮೊಂಜಾಬಿಕ್ನ ಸ್ಥಳಿಯ ವಿಮಾನನಿಲ್ದಾಣದಲ್ಲಿ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ದೋಣಿ, ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ ಮತ್ತು ಜೆಮಿನಿ ರಬ್ಬರಿಶ್ಡ್ ಕ್ರಾಫ್ಟ್ಗಳನ್ನು ಡ್ರೈವರ್ಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಿಗೆ ಸಹಕಾರವನ್ನು ನೀಡುತ್ತಿವೆ.
ಭಾರತೀಯ ನೌಕೆಯು ಅಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಿವೆ, ಆಹಾರ, ನೀರು, ಹೊದಿಕೆ ಇತ್ಯಾದಿ ಅಗತ್ಯ ವಸ್ತುಗಳನ್ನು ಚಂಡಮಾರುತ ಪೀಡಿತ ಮೊಜಾಂಬಿಕ್ ಜನರಿಗೆ ನೀಡಲಿದೆ.
ಮಾರ್ಚ್ 15 ರಂದು ಮೊಜಾಂಬಿಕ್ನ ಬೀರ್ನಲ್ಲಿ ‘IDAI’ ಚಂಡಮಾರುತ ಕಾಣಿಸಿಕೊಂಡಿದೆ. ಇದರಿಂದ ಅಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಷ್ಟವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.