ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲು ಬಿಜೆಪಿ ಸರ್ವ ಸನ್ನದ್ಧವಾಗಿದೆ. ‘ಮೈ ಭೀ ಚೌಕಿದಾರ್’ ಅಭಿಯಾನದ ಮೂಲಕ ಅದು ಜನರನ್ನು ತಲುಪುವ ಕಾರ್ಯ ಮಾಡುತ್ತಿದೆ. ಇದಕ್ಕಾಗಿ ‘ಮೈ ಭೀ ಚೌಕಿದಾರ್’ ಕಾಲರ್ ಟ್ಯೂನ್ ಅನ್ನು ಹೊರತಂದಿದೆ.
ಇದರ ಭಾಗವಾಗಿ, ವಿವಿಧ ಮೊಬೈಲ್ ನೆಟ್ವರ್ಕ್ ಗ್ರಾಹಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಈ ಕಾಲರ್ ಟ್ಯೂನ್ಗಳನ್ನು ಪಡೆಯಬಹುದು. ಅಧಿಕೃತ ಬಿಜೆಪಿ ಟ್ವೀಟರ್ ಹ್ಯಾಂಡಲ್ ಇದನ್ನು ಟ್ವೀಟ್ ಮಾಡಿದೆ. ಏರ್ಟೆಲ್ ಗ್ರಾಹಕರು 57878617 ನಂಬರ್ಗೆ ಡಯಲ್ ಮಾಡುವುದರೊಂದಿಗೆ ಈ ಕಾಲರ್ ಟ್ಯೂನ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗೆಯೇ ವೊಡಾಫೋನ್ ಗ್ರಾಹಕರು 53711116475 ನಂಬರ್ಗೆ ಹಾಗೂ ಐಡಿಯಾ ಗ್ರಾಹಕರು 5678911116415 ನಂಬರ್ಗೆ ಡಯಲ್ ಮಾಡಬಹುದಾಗಿದೆ. ಜಿಯೋ ಗ್ರಾಹಕರು chowkidar ಎಂದು ಟೈಪ್ ಮಾಡಿ 56789 ಗೆ SMS ಕಳುಹಿಸುವ ಮೂಲಕ ಕಾಲರ್ ಟ್ಯೂನ್ ಪಡೆಯಬಹುದಾಗಿದೆ.
You may now make #MainBhiChowkidar song as your Caller Tune.
• Dial 57878617 from your Airtel mobile phone.
• Dial 53711116475 from your Vodafone mobile phone.
• Dial 5678911116415 from your Idea mobile phone.
• Jio users can type chowkidar and send SMS to 56789. pic.twitter.com/9YDshjNWyN
— BJP (@BJP4India) March 19, 2019
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಶನಿವಾರ ‘ಮೈ ಭೀ ಚೌಕಿದಾರ್’ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನ ಆರಂಭಗೊಂಡ ಬಳಿಕ ಹಲವಾರು ಬಿಜೆಪಿ ನಾಯಕರು ಮತ್ತು ಮೋದಿ ಬೆಂಬಲಿಗರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿನ ತಮ್ಮ ಹೆಸರಿನ ಪ್ರಾರಂಭದಲ್ಲಿ ಚೌಕಿದಾರ್ ಎಂದು ಸೇರಿಸಿಕೊಂಡಿದ್ದಾರೆ. ಈ ಮೂಲಕ ಬಿಜೆಪಿಯ ಚುನಾವಣಾ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದಾರೆ.
ಇಂದು ಪ್ರಧಾನಿಯವರು ದೇಶದ 25 ಲಕ್ಷ ಚೌಕಿದಾರ್ (ಕಾವಲುಗಾರರು) ಅನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ದೇಶದ 500 ಭಾಗಗಳ ಚೌಕಿದಾರರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರಧಾನಿಯವರು ಸದಾ ತಮ್ಮನ್ನು ತಾವು ದೇಶದ ಚೌಕಿದಾರ್ ಎಂದು ಕರೆಯುತ್ತಾ ಬಂದಿದ್ದಾರೆ. ಈ ಬಗ್ಗೆ ವ್ಯಂಗ್ಯವಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಚೌಕಿದಾರ್ ಛೋರ್ ಹೈ ಎಂದು ಟೀಕಿಸಿದ್ದರು. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಬಿಜೆಪಿ ‘ಮೈ ಭೀ ಚೌಕಿದಾರ್’ ಅಭಿಯಾನವನ್ನು ಆರಂಭಿಸಿಯೇ ಬಿಟ್ಟಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಖ್ಯಾತವಾದ ಚಾಯ್ ಪೇ ಚರ್ಚಾದಂತೆಯೇ ಇದು ಕೂಡ ಈ ಬಾರಿ ಪ್ರಸಿದ್ಧಿಯಾಗುವ ನಿರೀಕ್ಷೆ ಇದೆ.
ವಿರೋಧಿಗಳು ಎಸೆದ ಕಲ್ಲನ್ನೇ ಬಳಸಿಕೊಂಡು ಅರಮನೆ ಕಟ್ಟುವ ವಿಭಿನ್ನ ಸಾಮರ್ಥ್ಯ ಮೋದಿಗಿದೆ ಎಂಬುದಕ್ಕೆ ಈ ವಿಭಿನ್ನ ಪ್ರಚಾರ ಅಭಿಯಾನಗಳೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.