ಚೆನ್ನೈ : ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗವು ಶ್ರೀವಲ್ಲಿ ಪುತ್ತೂರಿನ ಆಂಡಾಲ ದೇಗುಲದಲ್ಲಿದ್ದ ಅತ್ಯಂತ ಸುಂದರ ಕಮಲದ ರಂಗೋಲಿಯನ್ನು ಮರೆ ಮಾಡಿದೆ. ಚುನಾವಣಾ ನೀತಿ ಸಂಹಿತೆಯನ್ನು ಇದು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಈ ರಂಗೋಲಿಯನ್ನು ಮರೆಮಾಚಲಾಗಿದೆ. ಕಮಲವು ಬಿಜೆಪಿ ಪಕ್ಷದ ರಾಷ್ಟ್ರೀಯ ಚಿಹ್ನೆಯಾಗಿದೆ. ಚುನಾವಣಾ ಆಯೋಗವು 2019 ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ ಬಳಿಕದಿಂದ ದೇಶದಲ್ಲಿ ನೀತಿ ಸಂಹಿತೆ ಅನುಷ್ಠಾನಕ್ಕೆ ಬಂದಿದೆ.
ಚುನಾವಣಾ ಆಯೋಗದ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ದೇಗುಲದೊಳಗೆ ಅನುಷ್ಠಾನಕ್ಕೆ ತರಲಾದ ನೈತಿಕ ನೀತಿಯು ಹೇಗೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡುತ್ತದೆ ಎಂಬುದನ್ನು ಜನರು ಚುನಾವಣಾ ಆಯೋಗಕ್ಕೆ ಪ್ರಶ್ನಿಸಿದ್ದಾರೆ. ಕಾಂಗ್ರೇಸ್ ಪಕ್ಷವನ್ನು ಪ್ರತಿನಿಧಿಸುವ ಕೈ, ಎಎಪಿ ಪಕ್ಷವನ್ನು ಪ್ರತಿನಿಧಿಸುವ ಪೊರಕೆ, ಹೀಗೆ ಕೆಲವು ಪಕ್ಷಗಳನ್ನು ಪ್ರತಿನಿಧಿಸುವ ಚಿಹ್ನೆಗಳನ್ನು ಯಾವ ರೀತಿಯಲ್ಲಿ ಮರೆ ಮಾಚುತ್ತೀರಿ ಎಂಬ ಪ್ರಶ್ನೆಯನ್ನು ಜನರು ಚುನಾವಣಾ ಆಯೋಗಕ್ಕೆ ಕೇಳಿದ್ದಾರೆ.
‘ಚುನಾವಣಾ ಆಯೋಗ ಆಂಡಾಳ ದೇಗುಲದಲ್ಲಿನ ಕಮಲದ ರಂಗೋಲಿಯನ್ನು ಮರೆಮಾಚಿದೆ. ಅದು ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಆಯೋಗ ಹೇಳುತ್ತಿದೆ. ಇದಕ್ಕಿಂತಲೂ ಕೆಟ್ಟದ್ದು ಇನ್ನೇನು ಬೇಕು. ಕೈ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತದೆ, ಹಾಗಂತ ನಾವು ನಮ್ಮ ಕೈ ಕಡಿದುಕೊಳ್ಳಲು ಸಾಧ್ಯವೇ? ಎಂದು ಓರ್ವ ಟ್ವಿಟ್ಟರ್ ಬಳಕೆದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
EC officials masked lotus rangolis inside Srivilliputhur Andal Temple, saying that it’s against Election code of conduct, as it represents BJP’s Symbol.
Can it get any worse than this?
Should we all chop off our hands as they represent Congress symbol? pic.twitter.com/y2QDeT3Tsx
— Ethirajan Srinivasan (@Ethirajans) March 14, 2019
ಇನ್ನೊಂದೆಡೆ ಚುನಾವಣೆ ನಡೆಯುವುದಕ್ಕೂ 48 ಗಂಟೆಗಳ ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪಕ್ಷಗಳ ಜಾಹೀರಾತನ್ನು ನಿರ್ಬಂಧಿಸಲು ಕ್ರಮ ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗವು ಮುಂಬೈ ನ್ಯಾಯಾಲಯಕ್ಕೆ ತಿಳಿಸಿದೆ.
ರಾಜಕೀಯ ಜಾಹೀರಾತುಗಳನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿದಂತೆ ಮುಂಗಡವಾಗಿ ಹೊರಡಿಸಲಾದ ಎಲ್ಲ ಅಧಿಸೂಚನೆಗಳನ್ನು ಚುನಾವಣೆಗೆ ಮುಂಚಿತವಾಗಿ ಅನುಷ್ಠಾನಕ್ಕೆ ತರುವುದಾಗಿ ನ್ಯಾಯಮೂರ್ತಿ ನರೇಶ್ ಪಾಟೀಲ್ ಮತ್ತು ನ್ಯಾಯಮೂರ್ತಿ ಜಮಾದಾರ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.