ನವದೆಹಲಿ: ಭಾರತದ ಏಕೈಕ ಮಹಿಳಾ ರಿವರ್ ಪೈಲೆಟ್ ರೇಷ್ಮಾ ನಿಲೋಫರ್ ನಾಹ ಅವರು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ‘ನಾರಿ ಶಕ್ತಿ ಪುರಸ್ಕಾರ್’ನ್ನು ಪಡೆದುಕೊಂಡಿದ್ದಾರೆ. ರಿವರ್ ಪೈಲೆಟ್ ಆಗಿ ನಾಹ ಅವರು, ಕೋಲ್ಕತ್ತಾ ಸಾಗರ್ ಮತ್ತು ಹಲ್ದಿಯಾ ಬಂದರುಗಳಿಗೆ ಹೂಗ್ಲಿ ಮೂಲಕ ಮಾರ್ಗದರ್ಶನವನ್ನು ಮಾಡುತ್ತಾರೆ.
ಎಳವೆಯಿಂದಲೂ ವಿಭಿನ್ನ ವೃತ್ತಿಯನ್ನು ಅಯ್ದುಕೊಳ್ಳಬೇಕು ಎಂಬ ಆಶಯವನ್ನು ಇಟ್ಟುಕೊಂಡಿದ್ದ ರೇಷ್ನಾ ಅವರು, ಮೆರಿನ್ ಟೆಕ್ನಾಲಜಿಯಲ್ಲಿ ಬಿಇ ಕೋರ್ಸುನನ್ನು ಮುಗಿಸಿದರು. ಎರಡು ವರ್ಷಗಳ ಕಾಲ ಕಂಟೇನರ್ ಶಿಪ್ಗಳಲ್ಲಿ ಸೇವೆ ಸಲ್ಲಿಸಿದ ಅವರು, ಬಳಿಕ ಕೋಲ್ಕತ್ತಾ ಪೋರ್ಟ್ ಟ್ರಸ್ಟ್ಗೆ ಸೇರ್ಪಡೆಯಾದರು. ಸತತ ಆರು ವರ್ಷಗಳ ಕಾಲ ತರಬೇತಿಯನ್ನು ಪಡೆದುಕೊಂಡು, ದೇಶದ ಏಕೈಕ ರಿವರ್ ಪೈಲೆಟ್ ಆಗಿ ಹೊರಹೊಮ್ಮಿದರು.
ರಿವರ್ ಪೈಲೆಟ್ ಆಗಿ, ಸಾಗರದ ಮಿಡ್ಲ್ಟನ್ ಪಾಯಿಂಟ್ನಲ್ಲಿ ಆಗಮಿಸುವ ಶಿಪ್ಗಳನ್ನು ಹತ್ತುವ ಇವರು ಅವುಗಳನ್ನು 148 ಕಿಲೋಮೀಟರ್ ದೂರದ ಕೋಲ್ಕತ್ತಾದ ಹೂಗ್ಲಿಗೆ ಕರೆದೊಯ್ಯುತ್ತಾರೆ.
ಪುರುಷ ಪ್ರಾಬಲ್ಯದ ಈ ವೃತ್ತಿಯಲ್ಲಿ ಅವರೆಂದಿಗೂ ಮುಜುಗರವನ್ನು ಅನುಭವಿಸಿಲ್ಲ. ವ್ಯಕ್ತಿತ್ವದ ಮೂಲಕವೇ ಮಹಿಳೆ ಗೌರವಕ್ಕೆ ಪಾತ್ರಳಾಗುತ್ತಾಳೆ ಎಂಬುದನ್ನು ಅರಿತುಕೊಂಡಿರುವ ಅವರು, ವೃತ್ತಿಯಲ್ಲಿ ಕೀಳರಿಮೆಯನ್ನು ಬೆಳೆಸಿಕೊಂಡಿಲ್ಲ. ದೇಶದ ಏಕೈಕ ರಿವರ್ ಪೈಲೆಟ್ ಎಂದು ಕರೆಸಿಕೊಳ್ಳುವುದಕ್ಕೆ ಅವರಿಗೆ ಹೆಮ್ಮೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.