ಕಡಪ: ರಾಷ್ಟ್ರವ್ಯಾಪಿಯಾಗಿ ಉದಾತ್ತ ಅಭಿವೃದ್ಧಿ ಸೌಲಭ್ಯಗಳನ್ನು ಉತ್ತೇಜಿಸುವ ಕಾರ್ಯವನ್ನು ನೀತಿ ಆಯೋಗ ಆರಂಭಿಸಿದ್ದು, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಸುಸ್ಥಿರ ಅಭಿವೃದ್ಧಿ ಗುರಿಯಡಿ ನಾವೀನ್ಯ ಅಭಿವೃದ್ಧಿ ತಂತ್ರಗಾರಿಕೆಯನ್ನು ರೂಪಿಸಿದ ಜಿಲ್ಲೆಗಳಿಗೆ ಪ್ರಶಸ್ತಿಗಳನ್ನು ಪ್ರದಾನಿಸಿದೆ.
ಕೃಷಿ ವಲಯದಲ್ಲಿ ಮಹತ್ವದ ಸಮೃದ್ಧಿಯನ್ನು ಕಂಡಿರುವ ಆಂಧ್ರ ಪ್ರದೇಶದ ಕಡಪ ಜಿಲ್ಲೆಗೆ ನೀತಿ ಆಯೋಗವು, ’ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ’ ಅಡಿಯಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನಿಸಿದೆ.
ನೈಸರ್ಗಿಕ ವಿಪತ್ತು, ಬರ, ರೋಗ ಇತ್ಯಾದಿಗಳ ಸಂದರ್ಭದಲ್ಲಿ ಬೆಲೆ ಹಾನಿಗೊಳಗಾಗಿ ನಷ್ಟ ಅನುಭವಿಸುವ ರೈತರಿಗೆ ವಿಮಾ ಕವರೇಜ್ ಮತ್ತು ಆರ್ಥಿಕ ಧನಸಹಾಯವನ್ನು ನೀಡುವ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ, ರೈತರು ತಮ್ಮ ಕೃಷಿಯನ್ನು ಮುಂದುವರೆಸಲು ಆದಾಯ ಸ್ಥಿರತೆಗಳನ್ನು ನೀಡುತ್ತದೆ. ಇಂತಹ ಯೋಜನೆ ಕಡಪದ ಮೂಲೆ ಮೂಲೆಯ ರೈತರನ್ನೂ ತಲುಪಿದೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕಡಪ ಜಿಲ್ಲೆಯ ಮುಖ್ಯ ಯೋಜನಾ ಅಧಿಕಾರಿ, ’ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಮಾಡಿದ ಸಾಧನೆಗಾಗಿ ನಮಗೆ ರಾಷ್ಟ್ರೀಯ ಮಟ್ಟದ ಪುರಸ್ಕಾರ ಸಿಕ್ಕಿರುವುದು ಸಂತೋಷದ ವಿಷಯ. ಕಡಪ ಜಿಲ್ಲೆಯಲ್ಲಿನ ಇತರ ಚಟುವಟಿಕೆಗಳ ಹೊರತಾಗಿ, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯನ್ನು ನಾವು ಜನಪ್ರಿಯಗೊಳಿಸಿದ್ದೇವೆ. ಇದು ನಮ್ಮ ಜಿಲ್ಲೆಯ ಮೂಲೆ ಮೂಲೆಯ ರೈತರನ್ನೂ ತಲುಪಿದೆ’ ಎಂದಿದ್ದಾರೆ.
‘ಪ್ರತಿ ರೈತನೂ ಬಿಮಾ ಯೋಜನೆಯಿಂದ ಸಂತುಷ್ಟನಾಗಿದ್ದಾನೆ. ಆತ ಬೆಳೆದ ಪ್ರತಿ ಬೆಳೆಗೆ ವಿಮಾ ಸೌಲಭ್ಯ ದೊರೆಯುತ್ತಿದೆ. 2.2 ಲಕ್ಷ ರೈತರಿಗೆ ಮಣ್ಣಿನ ಕಾರ್ಡ್ ಸೇರಿದಂತೆ ಹಲವಾರು ಯೋಜನೆಗಳನ್ನು ತಲುಪಿಸಿದ್ದೇವೆ’ ಎಂದಿದ್ದಾರೆ.
Govt schemes like the Pradhan Mantri Fasal Bima Yojana & Soil Health Card, along with the initiatives of the district admin are ensuring that development reaches the last mile of #AspirationalDistrict YSR Kadapa.
The agriculture sector is sowing seeds of prosperity.
Watch how: pic.twitter.com/2SU5RQL84I— NITI Aayog (@NITIAayog) March 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.