ನೊಯ್ಡಾ: ಬೀದಿ ಬೀದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಗೋವುಗಳು ಉತ್ತರಪ್ರದೇಶದ ದೊಡ್ಡ ಸಮಸ್ಯೆ ಎನಿಸಿಕೊಂಡಿವೆ. ದನಗಳನ್ನು ಬೀದಿಯಲ್ಲಿ ಬಿಡಬಾರದು, ಅವುಗಳನ್ನು ಗೋಶಾಲೆಗಳಲ್ಲೇ ಇಟ್ಟು ಸಾಕಬೇಕು ಎಂದು ಸ್ಥಳಿಯಾಡಳಿತ ಮತ್ತು ಜಿಲ್ಲಾಡಳಿತಗಳಿಗೆ ಎಷ್ಟು ಬಾರಿ ಸರ್ಕಾರ ಆದೇಶ ನೀಡಿದರೂ ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಆಸಕ್ತಿಕರ ವಿಷಯವೆಂದರೆ, ನೊಯ್ಡಾದ ನಿವಾಸಿಗಳು ಈ ಸಮಸ್ಯೆಯ ವಿರುದ್ಧ ಅತ್ಯಂತ ವಿಭಿನ್ನವಾದ ರೀತಿಯಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಬೀದಿಯಲ್ಲಿ ಅಡ್ಡಾಡುತ್ತಿರುವ ಗೋವುಗಳ ಜೊತೆ ಸೆಲ್ಫಿಯನ್ನು ಕ್ಲಿಕ್ಕಿಸಿ ಅದನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಅದನ್ನು ಸಂಬಂಧಿಸಿದ ಆಡಳಿತಕ್ಕೆ ಟ್ಯಾಗ್ ಮಾಡಿ ಈ ಗೋವಿಗೆ ಆಶ್ರಯ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ವಝೀದ್ಪುರ ಸೆಕ್ಟರ್ 63ರಲ್ಲಿ ನೂತನವಾಗಿ ಗೋಶಾಲೆ ನಿರ್ಮಾಣವಾಗಿದೆ, ಬೀದಿಯಲ್ಲಿ ಅಡ್ಡಾಡುತ್ತಿರುವ ಗೋವುಗಳನ್ನು ಅಲ್ಲಿಗೆ ಕರೆದೊಯ್ದು ಆಶ್ರಯ ನೀಡಬೇಕು ಎಂಬುದು ‘#SelfieWithCow’ ಅಭಿಯಾನವನ್ನು ಆರಂಭಿಸಿರುವ ಅಮಿತ್ ಗುಪ್ತಾ, ಅಭಯ್ ಪಾಂಡೆ, ಸಚಿನ್ ಗೋಯಲ್ ಅವರ ಮನವಿಯಾಗಿದೆ. ಸೋಮವಾರದಿಂದ ಕೆಲವು ಸಾರಿಗೆ ಸ್ವಯಂಸೇವಕರ ಬೆಂಬಲದೊಂದಿಗೆ ಇವರು ಅಭಿಯಾನವನ್ನು ಆರಂಭಿಸಿದ್ದಾರೆ.
ಗೋವುಗಳ ಕಾರಣದಿಂದಾಗಿ ಟ್ರಾಫಿಕ್ ಜಾಮ್ಗೆ ಒಳಗಾಗುವ ಹಲವಾರು ರಸ್ತೆಗಳನ್ನು ಪತ್ತೆ ಮಾಡಿರುವ ಇವರು, ಅಲ್ಲಿಗೆ ತೆರಳಿ ಗೋವುಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಅದನ್ನು ಅಧಿಕಾರಿಗಳಿಗೆ ಟ್ಯಾಗ್ ಮಾಡುತ್ತಿದ್ದಾರೆ.
ರಸ್ತೆಗಳಲ್ಲಿ ದನಗಳು ಅಡ್ಡಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ, ಜನರು ಮತ್ತು ಗೋವುಗಳಿಗೂ ಇದರಿಂದ ಗಾಯಗಳಾಗುತ್ತಿವೆ. ಈ ರೀತಿಯಾಗಿ ದನಗಳನ್ನು ರಸ್ತೆಗೆ ಬಿಡುವುದು ಅಪಾಯಕಾರಿ. ಅವುಗಳನ್ನು ಸರ್ಕಾರ ರಚಿಸಿರುವ ಗೋಶಾಲೆಗೆ ಹಾಕಿ ಸಾಕಬೇಕು ಎಂಬುದು ಈ ಅಭಿಯಾನ ಆರಂಭಿಸಿರುವ ಯುವಕರ ಮನವಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.