ಮುಂಬಯಿ: ‘ಚೌಕೀದಾರ್ ಚೋರ್ ಹೇ’ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾತು ಮಹಾರಾಷ್ಟ್ರದ ಸೆಕ್ಯೂರಿಟಿ ಗಾರ್ಡ್ಗಳಿಗೆ ನೋವುಂಟು ಮಾಡಿದೆ. ಹೀಗಾಗಿ ಅವರು ರಾಹುಲ್ ವಿರುದ್ಧ ಪ್ರಕರಣವನ್ನು ದಾಖಲು ಮಾಡುವಂತೆ ಮುಂಬಯಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಸೋಮವಾರ ಮಹಾರಾಷ್ಟ್ರದ ರಾಜ್ಯ ಸುರಕ್ಷಾ ರಕ್ಷಕ್ ಯೂನಿಯನ್, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಸ್ಟೇಶನ್ಗೆ ತೆರಳಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.
’ಚೌಕೀದಾರ್ ಚೋರ್ ಹೇ’ ಎಂಬ ಮಾತು ಸೆಕ್ಯೂರಿಟಿ ಗಾರ್ಡ್ಗಳಿಗೆ ಅವಮಾನ ಮಾಡಿದಂತಿದೆ ಎಂಬುದು ಅವರ ಆರೋಪವಾಗಿದೆ.
ಸೆಕ್ಯೂರಿಟಿ ಗಾರ್ಡ್ಗಳಿಗೆ ಅವಮಾನ ಮಾಡುವಂತಹ ಘೋಷಣೆಗಳನ್ನು ಕೂಗುವುದರಿಂದ ನೆಹರೂ-ಗಾಂಧೀ ಪರಿವಾರ ದೂರವಿರಬೇಕು, ಇಂತಹ ಘೋಷಣೆ ಕೂಗಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಯೂನಿಯನ್ ಸದಸ್ಯರು ಮನವಿ ಮಾಡಿದ್ದಾರೆ.
ರಫೆಲ್ ಯುದ್ಧವಿಮಾನ ಖರೀದಿಗೆ ಸಂಬಂಧಿಸಿಂತೆ ನಿರಂತರವಾಗಿ ಸಮಾವೇಶಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ’ಚೌಕೀದಾರ್ ಚೋರ್ ಹೇ’ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಈ ಹಿಂದೆ ಎಎಪಿ ಸದಸ್ಯೆ ಅಲ್ಕಾ ಲಾಂಬಾ ಅವರೂ, ’ಈ ಬಾರಿ ಪ್ರಧಾನಿಯನ್ನು ಆರಿಸಿ, ಚೌಕೀದಾರನನ್ನು ನೇಪಾಳದಿಂದಲೂ ತರಬಹುದು’ ಎನ್ನುವ ಮೂಲಕ ನೇಪಾಳ ಜನತೆಗೆ ಅವಮಾನ ಮಾಡಿ ಬೈಸಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.