ನವದೆಹಲಿ: ಟೈಮ್ಸ್ ನೌ-ವಿಎಂಆರ್ ಫೆ. 5 ರಿಂದ ಫೆ.21ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ಪಷ್ಟ ಬೆಂಬಲವನ್ನು ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸುವುದಾಗಿ ಶೇ. 52 ರಷ್ಟು ಜನ, ರಾಹುಲ್ ಗಾಂಧಿಯನ್ನು ಬೆಂಬಲಿಸುವುದಾಗಿ ಶೇ. 27 ರಷ್ಟು ಜನ ಹೇಳಿದ್ದಾರೆ.
ಫೆ.1ರಂದು ಮಂಡಿಸಲಾದ ಮಧ್ಯಂತರ ಬಜೆಟ್ನಲ್ಲಿ ಘೋಷಣೆಯಾದ ಹಲವಾರು ಜನಪರ ಯೋಜನೆಗಳು ಈ ಬಾರಿಯ ಚುನಾವಣೆಯಲ್ಲಿ ಮೋದಿ ಸರ್ಕಾರದ ಕೈಹಿಡಿಯುವ ಸೂಚನೆಯನ್ನು ಸಮೀಕ್ಷೆ ನೀಡಿದೆ.
ಟೈಮ್ಸ್ ನೌ-ವಿಎಂಆರ್ ಪೋಲ್ನ ಪ್ರಮುಖ ಮುಖ್ಯಾಂಶಗಳು ಹೀಗಿವೆ
ನರೇಂದ್ರ ಮೋದಿ ಸರ್ಕಾರ ಭರವಸೆಗಳನ್ನು ಈಡೇರಿಸಿದೆಯೇ ? ಎಂದು ಕೇಳಲಾದ ಪ್ರಶ್ನೆಗೆ,
ಶೇ. 45.9% ರಷ್ಟು ಮಂದಿ ಸ್ವಲ್ಪ ಮಟ್ಟಿಗೆ ಈಡೇರಿಸಿದೆ ಎಂದರೆ,
ಶೇ. 27.3%ರಷ್ಟು ಮಂದಿ ಅರ್ಧದಷ್ಟು ಈಡೇರಿದೆ ಎಂದಿದ್ದಾರೆ.
ಶೇ. 26.8% ರಷ್ಟು ಮಂದಿ ಬಹಳಷ್ಟು ಈಡೇರಿದೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
2019 ರಲ್ಲಿ ರಾಹುಲ್ ಗಾಂಧಿ ವಿಶ್ವಾಸಾರ್ಹ ಪರ್ಯಾಯ ಎಂದು ನೀವು ಯೋಚಿಸುತ್ತೀರಾ? ಎಂದು ಕೇಳಲಾದ ಪ್ರಶ್ನೆಗೆ
ಶೇ. 43% ರಷ್ಟು ಮಂದಿ ಹೌದು ಎಂದಿದ್ದಾರೆ,
ಶೇ. 39.7% ರಷ್ಟು ಮಂದಿ ಇಲ್ಲ ಎಂದಿದ್ದಾರೆ.
ಶೇ. 17.3% ರಷ್ಟು ಮಂದಿ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ಎನ್ಡಿಎ ಸರಕಾರಗಳ ಆದಾಯ ತೆರಿಗೆ ಪರಿಹಾರ ಪ್ರಸ್ತಾಪಗಳ ಬಗ್ಗೆ ಕೇಳಲಾದ ಪ್ರಶ್ನೆಗೆ
ಶೇ. 33% ಮಂದಿ ಮೀತಿ ಮೀರಿದ್ದಾಗಿದೆ ಎಂದರೆ,
ಶೇ. 29.9% ಮಂದಿ ಸ್ವಲ್ಪ ಮಟ್ಟಿಗೆ ಮತ್ತು ತಡವಾಗಿ ಆದರೂ ಪ್ರಧಾನಿಯವರ ಉದ್ದೇಶ ಒಳ್ಳೆಯದಿದೆ ಎಂದಿದ್ದಾರೆ.
ಶೇ. 24.1% ರಷ್ಟು ಮಂದಿ ಇನ್ಮುಂದೆ ತೆರಿಗೆ ಜಾಸ್ತಿಯಾಗಬಹುದು ಎಂದಿದ್ದಾರೆ.
ಶೇ. 13% ರಷ್ಟು ಮಂದಿ ಮೇಲ್ವರ್ಗದವರ ಓಲೈಕೆಗಾಗಿ ಎಂದಿದ್ದಾರೆ.
ಈ ಚುನಾವಣೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ನಿರ್ಣಾಯಕ ಸಮಸ್ಯೆಗಳು? ಎಂದು ಕೇಳಲಾದ ಪ್ರಶ್ನೆಗೆ
ಉದ್ಯೋಗ – ಶೇ. 40.2%
ಸಾಲ ಮನ್ನಾ / ಕೃಷಿಪರ ಯೋಜನೆಗಳು – ಶೇ. 17.7%
ಮಂದಿರಗಳ ನಿರ್ಮಾಣ – ಶೇ. 14.1%
ಮೀಸಲಾತಿ – ಶೇ. 5.4%
ಮಹಿಳಾ ಹಕ್ಕು (ತ್ರಿವಳಿ ತಲಾಖ್ / ಶಬರಿಮಲೈ) – ಶೇ. 5.3%
ಜನ್ ಧನ್ ಮತ್ತಿತರ ಯೋಜನೆಗಳು – ಶೇ. 4.1%
ಗೋ ಸಂರಕ್ಷಣೆ – ಶೇ. 3.7%
ರಫೇಲ್ ಡೀಲ್ – ಶೇ. 2.9%
ಇತರೆ – ಶೇ. 6.6%
ರೈತರಿಗೆ ವಾರ್ಷಿಕ 600 ರೂಪಾಯಿಯ ಸಹಾಯಧನ ಅತ್ಯಂತ ಪ್ರಯೋಜನಕಾರಿಯೇ? ಎಂದು ಕೇಳಲಾದ ಪ್ರಶ್ನೆಗೆ,
ಶೇ. 55.5% ರಷ್ಟು ಜನ ಪ್ರಯೋಜನಕಾರಿ ಎಂದು ಅಭಿಪ್ರಾಯಿಸಿದ್ದಾರೆ.
ಶೇ. 29% ರಷ್ಟು ಜನ ಅಷ್ಟೇನೂ ಇಲ್ಲ ಎಂದಿದ್ದಾರೆ,
ಶೇ. 15% ರಷ್ಟು ಮಂದಿ ಸಹಾಯ ಆಗುತ್ತೋ ಇಲ್ಲವೋ ಆದರೆ ಉತ್ತಮ ಉದ್ದೇಶದಿಂದ ತಂದ ಯೋಜನೆ ಎಂದು ಅಭಿಪ್ರಾಯಿಸಿದ್ದಾರೆ.
ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬ ಆಪಾದನೆ ಕುರಿತು ಕೇಳಲಾದ ಪ್ರಶ್ನೆಗೆ
ಶೇ. 39.5% ರಷ್ಟು ಮಂದಿ ಉದ್ಯೋಗ ಕಡಿತ ಕಮ್ಮಿಯಾಗಿದ್ದು, ಉದ್ಯೋಗಾವಕಾಶಗಳು ಹೆಚ್ಚಿವೆ ಎಂದಿದ್ದಾರೆ
ಶೇ. 36.4% ರಷ್ಟು ಮಂದಿ ಇದು ಸಾಮಾನ್ಯ ಉದ್ಯೋಗ ನಷ್ಟ ಎಂದಿದ್ದಾರೆ
ಶೇ. 24% ರಷ್ಟು ಮಂದಿ ಉದ್ಯೋಗ ನಷ್ಟ ಜಾಸ್ತಿಯಾಗಿದ್ದು, ಪ್ರಖರ ಅಂಕಿ-ಅಂಶ ಇಲ್ಲ ಎಂದಿದ್ದಾರೆ.
ದೇಶದ ಬಗ್ಗೆ ಸ್ಪಷ್ಟ ರೂಪುರೇಶೆಯನ್ನು ಹೊಂದಿರುವವರು ಯಾರು ? ಎಂದು ಕೇಳಲಾದ ಪ್ರಶ್ನೆಗೆ,
ಶೇ. 52% ರಷ್ಟು ಮಂದಿ ಮೋದಿ ಎಂದಿದ್ದಾರೆ,
ಶೇ. 27% ರಷ್ಟು ಮಂದಿ ರಾಹುಲ್ ಎಂದಿದ್ದಾರೆ.
ಶೇ. 13.75% ರಷ್ಟು ಮಂದಿ ಯಾರೂ ಇಲ್ಲ ಎಂದಿದ್ದಾರೆ.
ಶೇ. 7.3% ರಷ್ಟು ಮಂದಿ ಸ್ಥಳಿಯ ನಾಯಕರನ್ನು ಆಯ್ಕೆ ಮಾಡಿದ್ದಾರೆ.
ಪ್ರತಿಪಕ್ಷಗಳ ಮಹಾಘಟ್ಬಂಧನ್ ಬಗ್ಗೆ ಪ್ರತಿಕ್ರಿಯೆ ಕುರಿತು
ಶೇ. 34.6% ರಷ್ಟು ಮಂದಿ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ಶೇ. 32.1% ರಷ್ಟು ಜನರು, ಇವರು ಅವಕಾಶವಾದಿಗಳು ಎಂದಿದ್ದಾರೆ,
ಶೇ. 22.2% ರಷ್ಟು ಮಂದಿ ಅವರಿಗೆ ಅವರ ಸಿದ್ಧಾಂತದ ಮೇಲೆ ನಂಬಿಕೆ ಇದೆ ಎಂದಿದ್ದಾರೆ.
ಶೇ. 11.1% ರಷ್ಟು ಜನರು ಮಾತ್ರ ಇವರು ಪರ್ಯಾಯವಾಗಬಲ್ಲರು ಎಂದಿದ್ದಾರೆ.
ಈ ಸಮೀಕ್ಷೆಗ ಒಳಪಟ್ಟ ಬಹುತೇಕ ಮಂದಿ ನರೇಂದ್ರ ಮೋದಿಯವರು ತಮ್ಮ ನೆಚ್ಚಿನ ಆಯ್ಕೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.