ನವದೆಹಲಿ: ಕೈತುಂಬಾ ವೇತನ ಪಡುವ ನಮ್ಮ ಜನಪ್ರತಿನಿಧಿಗಳಿಗಾಗಿ ನಮ್ಮ ಸಂಸತ್ತಿನಲ್ಲಿ ಅತಿ ಕಡಿಮೆ ಬೆಲೆಗೆ ಆಹಾರಗಳು ದೊರೆಯುತ್ತಿವೆ. ರೂ.38 ನೀಡಿದರೆ ಅಲ್ಲಿ ಭೂರಿ ಭೂಜನವನ್ನೇ ಮಾಡಬಹುದು.
ಸರ್ಕಾರದ ಸಬ್ಸಿಡಿಯಲ್ಲಿ ನಡೆಯುತ್ತಿರುವ ಸಂಸತ್ತಿನ ನಾಲ್ಕು ಕ್ಯಾಂಟೀನ್ಗಳಲ್ಲಿ ರೈಸ್ ಮತ್ತು ದಾಲ್ಗೆ 6 ರೂಪಾಯಿ, ತರಕಾರಿ ಸ್ಟ್ಯೂಗೆ 4 ರೂಪಾಯಿ, ಮೀನು ಪದಾರ್ಥಕ್ಕೆ 20 ರೂಪಾಯಿ ಮತ್ತು ಖೀರ್ಗೆ 8 ರೂಪಾಯಿ.
ಸಂಸದರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ಆಹಾರ ನೀಡುತ್ತಿರುವ ಪರಿಣಾಮವಾಗಿ 2013-14ನೇ ಸಾಲಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 14 ಕೋಟಿ ರೂಪಾಯಿ ನಷ್ಟವಾಗಿದೆ. ಹೊರಗಡೆ 100 ರೂಪಾಯಿಗೆ ಸಿಗುವ ಆಹಾರಗಳು ಸಂಸತ್ತು ಕ್ಯಾಂಟೀನ್ನಲ್ಲಿ ಕೇವಲ 38 ರೂಪಾಯಿಗೆ ದೊರೆಯುತ್ತಿವೆ.
ಪತ್ರಕರ್ತರು, ಸಂಸತ್ತು ಸಿಬ್ಬಂದಿಗಳು ಕೂಡ ಇಲ್ಲಿ ಆಹಾರ ಸೇವಿಸಬಹುದು. ಸಂಸತ್ತು ಕ್ಯಾಂಟೀನ್ಗೆ ಸಬ್ಸಿಡಿ ನೀಡಲು ಸರ್ಕಾರ 14 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬ ಅಂಶ ಆರ್ಟಿಐ ಅರ್ಜಿಯಿಂದ ಬಹಿರಂಗಗೊಳಿಸಿದೆ.
ಸಬ್ಸಿಡಿ ಗ್ಯಾಸನ್ನು ತೊರೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರಿಗೆ ಕರೆ ನೀಡಿದಂತೆ, ಸಬ್ಸಿಡಿಯಲ್ಲಿ ಆಹಾರ ತಿನ್ನಬೇಡಿ ಎಂದು ರಾಜಕಾರಣಿಗಳಿಗೂ ಕರೆ ನೀಡುವ ಅವಶ್ಯಕತೆಯಿದೆ. ಇದರಿಂದ ಸರ್ಕಾರಕ್ಕಾಗುವ ಕೋಟಿಗಟ್ಟಲೆ ನಷ್ಟವನ್ನಾದರೂ ತಪ್ಪಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.