ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ, 56 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ನಟ ಖಾದರ್ ಖಾನ್, ಅಕಾಲಿ ದಳ ನಾಯಕ ಸುಖ್ದೇವ್ ಸಿಂಗ್ ಧಿಂಡ್ಸಾ, ಖ್ಯಾತ ಪತ್ರಕರ್ತ ಕುಲದೀಪ್ ನಾಯರ್ ಅವರು ಪ್ರಶಸ್ತಿ ಪಡೆದ ಪ್ರಮುಖರಾಗಿದ್ದಾರೆ. ದಿವಂಗತ ಖಾದರ್ ಖಾನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ನೀಡಲಾಗಿದೆ. ನಾಯರ್ ಮತ್ತು ಧಿಂಡ್ಸಾ ಅವರಿಗೆ ಪದ್ಮಭೂಷಣವನ್ನು ಮರಣೋತ್ತರವಾಗಿ ನೀಡಲಾಗಿದೆ.
ಖ್ಯಾತ ರಂಗ ಪ್ರತಿಭೆ ಮತ್ತು ಇತಿಹಾಸಕಾರ ಮಹಾರಾಷ್ಟ್ರದ ಬಾಬಾಸಾಹೇಬ್ ಪುರಂದರೆ ಅಲಿಯಾಸ್ ಬಲ್ವಂತ್ ಮೋರೇಶ್ವರ ಪುರಂದರೆ ಅವರಿಗೆ ಪದ್ಮ ವಿಭೂಷಣವನ್ನು ನೀಡಲಾಗಿದೆ. ಬಿಹಾರ ನಾಯಕ ಹುಕುಂದೇವ್ ನಾರಾಯಣ್ ಯಾದವ್ ಅವರಿಗೆ ಪದ್ಮಭೂಷಣವನ್ನು ನೀಡಲಾಗಿದೆ. ಟೆಕ್ನೋ ದಿಗ್ಗಜ ಸಿಸ್ಕೋ ಸಿಸ್ಟಮ್ನ ಮಾಜಿ ಸಿಇಓ ಜಾನ್ ಚೇಂಬರ್ಸ್ ಮತ್ತು ಖ್ಯಾತ ನೃತ್ಯಗಾರ ಮತ್ತು ಚಿತ್ರ ನಿರ್ಮಾಪಕ ಪ್ರಭುದೇವ ಅವರಿಗೆ ಪದ್ಮಶ್ರೀ ದೊರೆತಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು. 2019ರ ಪದ್ಮ ಪ್ರಶಸ್ತಿಗಳಿಗೆ 5ಸಾವಿರ ಹೆಸರುಗಳು ನಾಮನಿರ್ದೇಶನಗೊಂಡಿದ್ದವು. 2014ರಲ್ಲಿ 2200 ಹೆಸರುಗಳು ನಾಮನಿರ್ದೇಶನಗೊಂಡಿದ್ದವು. ಒಟ್ಟು 112 ವ್ಯಕ್ತಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ಅವರಲ್ಲಿ 56 ಮಂದಿಗೆ ಇವತ್ತು ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ.
Delhi: President Ram Nath Kovind confers Padma Bhushan award upon actor Mohanlal. #PadmaAwards pic.twitter.com/CFZejeale6
— ANI (@ANI) March 11, 2019
Delhi: President Ram Nath Kovind confers Padma Shri award upon table tennis player Sharath Kamal and grandmaster Harika Dronavalli. #PadmaAwards pic.twitter.com/8zbhKRFviU
— ANI (@ANI) March 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.