ನವದಹೆಲಿ: ಎಪ್ರಿಲ್ 11ರಿಂದ ಆರಂಭಗೊಳ್ಳಲಿರುವ 2019ರ ಲೋಕಸಭಾ ಚುನಾವಣೆ ಹಲವಾರು ಪ್ರಥಮಗಳನ್ನು ಕಾಣಲಿದೆ, ಇದೇ ಮೊದಲ ಬಾರಿಗೆ ಈ ಚುನಾವಣೆಯಲ್ಲಿ ಮತಯಂತ್ರಗಳ ಮೇಲೆ ಪಕ್ಷದ ಚಿಹ್ನೆಯೊಂದಿಗೆ ಅಭ್ಯರ್ಥಿಯ ಭಾವಚಿತ್ರವೂ ಕಾಣಿಸಿಕೊಳ್ಳಲಿದೆ.
ಸ್ವತಂತ್ರ, ಪ್ರಾಮಾಣಿಕ ಮತ್ತು ಮುಕ್ತ ಚುನಾವಣೆಯನ್ನು ಆಯೋಜನೆಗೊಳಿಸುವ ಸಲುವಾಗಿ ಚುನಾವಣಾ ಆಯೋಗವು ಮತದಾರರ ಹಿತಾಸಕ್ತಿಗೆ ಅನುಗುಣವಾಗಿ ಹಲವಾರು ಕ್ರಮಗಳನ್ನು ಆಯೋಜನೆಗೊಳಿಸಿದೆ. ಈ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಎಲ್ಲಾ ಮತಯಂತ್ರಗಳಲ್ಲೂ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್(ವಿವಿಪ್ಯಾಟ್) ಇರಲಿದೆ.
ಮಾತ್ರವಲ್ಲದೇ ಅಪರಾಧಿ ರಾಜಕೀಯದ ವಿರುದ್ಧ ಸಮರ ಸಾರಲು, ಕ್ರಿಮಿನಲ್ ಹಿನ್ನಲೆಯುಳ್ಳ ಎಲ್ಲಾ ಅಭ್ಯರ್ಥಿಗಳು ಪ್ರಚಾರದ ಸಂದರ್ಭದಲ್ಲಿ ಕನಿಷ್ಠ ಮೂರು ಬಾರಿಯಾದರೂ ತಮ್ಮ ವಿರುದ್ಧದ ಪ್ರಕರಣಗಳ ಮಾಹಿತಿಗಳನ್ನು ದಿನ ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಗಳಲ್ಲಿ ಪ್ರಸಾರಗೊಳಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. ರಾಜಕೀಯ ಪಕ್ಷಗಳು ಕೂಡ ತಮ್ಮ ವೆಬ್ಸೈಟ್ನಲ್ಲಿ ಅಭ್ಯರ್ಥಿಯ ಕ್ರಿಮಿನಲ್ ಹಿನ್ನಲೆಯ ಬಗ್ಗೆ ಮಾಹಿತಿಯನ್ನು ಪ್ರಚಾರದ ವೇಳೆ ಮೂರು ಬಾರಿ ನೀಡಬೇಕು ಎಂದು ಸೂಚಿಸಲಾಗಿದೆ.
ಚುನಾವಣಾ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ. cVIGIL app ಅನ್ನು ಬಳಸಲಿದೆ. ಇದರ ಮೂಲಕ ಆಂಡ್ರಾಯ್ಡ್ ಬಳಕೆದಾರರು ಯಾವುದೇ ತರನಾದ ಉಲ್ಲಂಘನೆಗಳ ಬಗ್ಗೆ ನೇರವಾಗಿ ಆಯೋಗಕ್ಕೆ ತಿಳಿಸಬಹುದಾಗಿದೆ.
‘ಉಲ್ಲಂಘನೆಗಳ ವೀಡಿಯೋ ಅಥವಾ ಫೋಟೋವನ್ನು ಕ್ಲಿಕ್ಕಿಸಿ ಇದರ ಬಗ್ಗೆ ವಿವರವನ್ನು ನೀಡಿ cVIGIL app ಮೂಲಕ ಅಪ್ಲೋಡ್ ಮಾಡಬೇಕು. ದೂರುದಾರ ಅನಾಮಧೇಯನಾಗಿ ಉಳಿಯಲು ಬಯಸಿದರೆ ಆತನಿಗೆ ಆ ಅವಕಾಶವೂ ಇದೆ. ಆನಿಗೆ ಪ್ರಕರಣದ ವಿವರಗಳ ಅಪ್ಡೇಟ್ ಕೂಡ ಸಿಗಲಿದೆ.
ಚುನಾವಣಾ ಪ್ರಚಾರದ ವೇಳೆ ಪ್ಲಾಸ್ಟಿಕ್, ಪಾಲಿಥೇನ್ಗಳನ್ನು ಬಳಕೆ ಮಾಡದಂತೆ ತಿಳಿಸಲಾಗಿದೆ. ಸಂಪೂರ್ಣ ಪರಿಸರ ಸ್ನೇಹಿ ವಿಧಾನದ ಮೂಲಕ ಪ್ರಚಾರ ನಡೆಸುವಂತೆ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.