ನವದೆಹಲಿ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಲ್ಲೊಂದಾದ ಉಜ್ವಲ ಯೋಜನೆಯಡಿ ವಿತರಿಸಲಾದ ಎಲ್ಪಿಜಿ ಸಿಲಿಂಡರ್ಗಳ ಸಂಖ್ಯೆ ಶುಕ್ರವಾರ 7 ಕೋಟಿಯನ್ನು ತಲುಪಿದೆ. ಗೀತಾ ದೇವಿಯವರು ಈ ಯೋಜನೆಯ 7 ನೇ ಕೋಟಿ ಫಲಾನುಭವಿಯಾಗಿ ಹೊರಹೊಮ್ಮಿದರು.
‘ಮಹಿಳಾ ದಿನಾಚರಣೆಯ ದಿನದಂದೇ ಉಜ್ವಲ ಯೋಜನೆಯಡಿ ವಿತರಿಸುವ ಎಲ್ಪಿಜಿ ಸಂಖ್ಯೆ 7 ಕೋಟಿಯನ್ನು ತಲುಪಿದೆ. ಇದು ಮಹತ್ವದ ಮೈಲಿಗಲ್ಲು’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
2016ರಲ್ಲಿ ಆರಂಭಗೊಂಡಿರುವ ಈ ಯೋಜನೆ ಕೇವಲ 34 ತಿಂಗಳುಗಳಲ್ಲಿ ಇಂತಹ ಮಹತ್ವದ ಸಾಧನೆಯನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
2016ರ ಮೇ1ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು 5 ಕೋಟಿ ಟಾರ್ಗೆಟ್ನೊಂದಿಗೆ ಆರಂಭ ಮಾಡಿದ್ದರು. ಬಳಿಕ ಟಾರ್ಗೆಟ್ನ್ನು ವಿಸ್ತರಣೆ ಮಾಡುತ್ತಾ ಹೋಗಲಾಯಿತು.
ಈ ಸಾಧನೆಗಾಗಿ ಮಹಿಳೆಯರನ್ನು ಅಭಿನಂದಿಸಿ ಪ್ರಧಾನ್, ಈ ಸಾಧನೆಯ ಹಿಂದಿನ ಪ್ರೇರಕ ಶಕ್ತಿ ಮಹಿಳೆಯರೇ ಆಗಿದ್ದಾರೆ ಎಂದರು. ಸರ್ಕಾರ ಕೇವಲ ಸಿಲಿಂಡರ್ನ್ನು ಹಂಚಿಕೆ ಮಾಡಿಲ್ಲ, ಅದರೊಂದಿಗೆ ನಗುವನ್ನೂ ಪಸರಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.