ನವದೆಹಲಿ: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆಯು ವೈಮಾನಿಕ ದಾಳಿ ನಡೆಸಿದ ಮರುದಿನ ಅತ್ಯಂತ ಪ್ರೇರಣಾದಾಯಕ ಸಂದೇಶವುಳ್ಳ ಕವಿತೆಯನ್ನು ಟ್ವಿಟ್ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದ ಭಾರತೀಯ ಸೇನೆಯು, ಇದೀಗ ಮತ್ತೊಮ್ಮೆ ತಾನು ಯುದ್ಧಸನ್ನಿವೇಶ ಎದುರಿಸಲು ಸರ್ವ ಸನ್ನದ್ಧವಾಗಿರುವುದಾಗಿ, ಯಾವುದೇ ಪರಿಸ್ಥಿತಿಯಲ್ಲಿ ವಿಜಯಿಯಾಗಿ ಹೊರಹೊಮ್ಮುವುದಾಗಿ ದೇಶದ ಜನರಿಗೆ ಭರವಸೆಯನ್ನು ನೀಡುವ ಸಂದೇಶವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.
ಶಸ್ತ್ರಾಸ್ತ್ರ ಪಡೆಗಳಿಗೆ ದೇಶವೇ ಮೊದಲು ಎಂಬ ಸಂದೇಶವನ್ನು ಇನ್ಸ್ಟಾಗ್ರಾಂನಲ್ಲಿ ಸೇನೆ ನೀಡಿದೆ.
ಸೇನೆಯ ಯುದ್ಧ ಟ್ಯಾಂಕ್ನ ಚಿತ್ರವನ್ನು #SaturdayMotivation, #saturdaythoughts ಎಂಬ ಕ್ಯಾಪ್ಷನ್ನೊಂದಿಗೆ ’ಭಾರತೀಯ ಸೇನಾ ಸರ್ವದಾ ವಿಜಯಿ, ವಿಜಯಿ ಆಗಿಯೇ ಇರಲಿದೆ, ರಾಷ್ಟ್ರಸರ್ವಪರಿ’ ಎಂಬ ಸಂದೇಶವನ್ನು ರವಾನಿಸಿದೆ.
ವೈಮಾನಿಕ ದಾಳಿಯ ಮರುದಿನ ಟ್ವಿಟ್ ಮಾಡಿದ್ದ ಭಾರತೀಯ ಸೇನೆಯು, ಶತ್ರುಗಳೊಂದಿಗೆ ವಿನಮ್ರವಾಗಿ ವರ್ತಿಸಿದರೆ ಅವರು ನಮ್ಮನ್ನು ಹೇಡಿಗಳು ಅಂದುಕೊಳ್ಳುತ್ತಾರೆ. ಕೌರವರು ಪಾಂಡವರನ್ನು ಅಂದುಕೊಂಡಂತೆ ಎಂಬ ಸಂದೇಶವನ್ನು ಸಾರುವ ಕವಿತೆಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿತ್ತು. ರಾಮಧಾರಿ ಸಿಂಗ್ ದಿನ್ಕರ್ ಎಂಬ ಹಿಂದಿ ಕವಿಯ ಕವಿತೆ ಇದಾಗಿದೆ.
ಭಾರತೀಯ ಸೇನೆಯು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಪ್ರೇರಣಾದಾಯಕ ಸಂದೇಶಗಳನ್ನು ಹಂಚಿಕೊಳ್ಳುತ್ತಿರುತ್ತದೆ, ಈ ಮೂಲಕ ಅದು ಯೋಧರ ನೈತಿಕ ಸ್ಥೈರ್ಯವನ್ನು ಉನ್ನತ ಮಟ್ಟದಲ್ಲಿಡುವ ಪ್ರಯತ್ನ ಮಾಡುತ್ತದೆ. ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ನಾವು ಸದಾ ಸಿದ್ಧ ಎಂಬ ಭರವಸೆಯನ್ನು ಜನರಿಗೆ ನೀಡುತ್ತಿರುತ್ತದೆ.
View this post on Instagram
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.