ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ಅಲ್ಲಿ ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ಗೆ ಶಿಲಾನ್ಯಾಸವನ್ನು ನೆರವೇರಿಸಿದರು. ಅದಕ್ಕೂ ಮುನ್ನ ದೇಗುಲದಲ್ಲಿ ಅವರು ಪ್ರಾರ್ಥನೆಯನ್ನು ಸಲ್ಲಿಸಿದರು. ದೀನದಯಾಳ್ ಹಸ್ತಕುಳ ಸಂಕುಲದಲ್ಲಿ ನ್ಯಾಷನಲ್ ವುಮೆನ್ ಲವ್ಲಿವುಡ್ ಮೀಟ್ 2019ನಲ್ಲೂ ಅವರು ಭಾಗಿಯಾದರು.
ಖಾನ್ಪುರಕ್ಕೆ ತರೆಳಿ ಪಂಕಿ ಪವರ್ ಪ್ಲಾಂಟ್ ಉದ್ಘಾಟಿಸಿದರು, ವೀಡಿಯೋ ಲಿಂಕ್ ಮೂಲಕ ಲಕ್ನೋ ಮೆಟ್ರೋ ರೈಲ್ನ ಸೆಕ್ಷನ್ ಉದ್ಘಾಟಿಸಿದರು.
ಘಾಜಿಯಾಬಾದ್ಗೂ ತೆರಳಿ ಅಲ್ಲಿ ವಿವಿಧ ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ದಿಲ್ಶಾದ್ ಗಾರ್ಡನ್-ಶಹೀದ್ ಸ್ಥಳ್ ಮೆಟ್ರೋ ಸೆಕ್ಷನ್ನನ್ನು ಅವರು ಉದ್ಘಾಟಿಸಲಿದ್ದಾರೆ, ಶಹೀದ್ ಸ್ಥಳದಿಂದ ರೈಲಿಗೆ ಚಾಲನೆಯನ್ನು ನೀಡಲಿದ್ದಾರೆ.
ವಾರಣಾಸಿಯಲ್ಲಿ ಮಾತನಾಡಿದ ಮೋದಿ, ‘ವಿಶ್ವನಾಥ ಧಾಮ ಯೋಜನೆಯ ಬಗ್ಗೆ ನಾನು ಹಲವಾರು ವರ್ಷಗಳಿಂದ ಚಿಂತನೆ ಮಾಡುತ್ತಿದ್ದೇನೆ. ಸಕ್ರಿಯ ರಾಜಕಾರಣಕ್ಕೆ ಬರುವ ಮುನ್ನವೂ ನಾನು ಕಾಶಿ ದೇಗುಲಕ್ಕೆ ಬಂದಿದ್ದೇನೆ. ಆವಾಗಲೆಲ್ಲಾ ಈ ದೇಗುಲ ಆವರಣಕ್ಕೆ ಏನಾದರೂ ಮಾಡಬೇಕು ಅನಿಸುತ್ತಿತ್ತು. ಭೋಲೆ ಬಾಬಾನ ಆಶೀರ್ವಾದದಿಂದ ನನ್ನ ಕನಸು ಸಾಕಾರಗೊಳ್ಳುತ್ತಿದೆ. ಈ ಬಾರಿಯ ಶಿವರಾತ್ರಿ ಕಾಶಿಯಲ್ಲಿ ವಿಶೇಷವಾಗಿರುತ್ತದೆ ಎಂದು ನಾನು ಹೇಳಿದ್ದೆ, ಕಾಶಿಯಲ್ಲಿ ಯಾತ್ರಾರ್ಥಿಗಳಿಗಾಗಿನ ಸವಲತ್ತುಗಳನ್ನು ಸುಧಾರಿಸುವ ಯೋಜನೆಗಳತ್ತ ನಾವು ಗಮನ ಹರಿಸಿದ್ದೇವೆ’ ಎಂದರು.
ಶತ್ರುಗಳು ಈ ದೇಗುಲದ ಮೇಲೆ ಸದಾ ಕಣ್ಣಿಟ್ಟಿದ್ದಾರೆ. ಹಲವಾರು ಬಾರಿ ದಾಳಿಗಳೂ ಆಗಿವೆ, ಆದರೆ ಇಲ್ಲಿನ ಶಕ್ತಿಯಲ್ಲಿ ನಂಬಿಕೆ ಇದೆ, ಈ ದೇಗುಲ ಜನರನ್ನು ನಿರಂತರವಾಗಿ ಬಲಗೊಳಿಸಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.