ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಯಲ್ಲಿ ಭಾರತೀಯ ಆಟಗಾರರ ಕ್ಯಾಪ್ ಎಲ್ಲರ ಗಮನವನ್ನು ಸೆಳೆಯಿತು. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮತ್ತು ಶಸ್ತ್ರಾಸ್ತ್ರ ಪಡೆಗಳ ಗೌರವಾರ್ಥ ಆಟಗಾರರು ವಿಶೇಷವಾಗಿ ಸಿದ್ಧಪಡಿಸಿದ ಆರ್ಮಿ ಕ್ಯಾಪ್ನೊಂದಿಗೆ ಕಣಕ್ಕಿಳಿದರು.
ಶಸ್ತ್ರಾಸ್ತ್ರ ಪಡೆ, ಹುತಾತ್ಮ ಯೋಧರ ಗೌರವಾರ್ಥ ಮತ್ತು ದೇಶದ ಜನರಿಗೆ ರಾಷ್ಟ್ರೀಯ ರಕ್ಷಣಾ ಫಂಡ್ಗೆ ದೇಣಿಗೆಯನ್ನು ನೀಡುವಂತೆ ಉತ್ತೇಜಿಸುವ ಸಲುವಾಗಿ ಈ ವಿಶೇಷ ಕ್ಯಾಪ್ನ್ನು ತೊಟ್ಟು ಭಾರತೀಯ ಆಟಗಾರರು ಫೀಲ್ಡ್ಗೆ ಇಳಿದರು.
ಮಾಜಿ ನಾಯಕ ಎಂಎಸ್ ಧೋನಿಯವರು ಬಿಸಿಸಿಐ ವಿನ್ಯಾಸ ಪಡಿಸಿದ ಈ ವಿಶೇಷ ಕ್ಯಾಪ್ನ್ನು ಸಹಆಟಗಾರರಿಗೆ ವಿತರಿಸಿದರು. ಧೋನಿ ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿದ್ದಾರೆ.
ಈ ಬಗ್ಗೆ ಭಾವುಕರಾಗಿ ನುಡಿದ ನಾಯಕ ವಿರಾಟ್ ಕೊಹ್ಲಿ, ಇದು ಅತ್ಯಂತ ವಿಶೇಷ ಕ್ಯಾಪ್. ಶಸ್ತ್ರಾಸ್ತ್ರ ಪಡೆಗಳಿಗೆ ನಾವು ಸಲ್ಲಿಸುತ್ತಿರುವ ಗೌರವ ಎಂದರು.
ಅಲ್ಲದೇ ಇಂದಿನ ಮ್ಯಾಚ್ನ ವೇತನವನ್ನು ನಾವು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುತ್ತಿದ್ದೇವೆ. ಎಲ್ಲಾ ದೇಶವಾಸಿಗಳು ಇದೇ ರೀತಿ ಕೊಡುಗೆ ನೀಡಿ, ಯೋಧರ ಮತ್ತು ಅವರ ಕುಟುಂಬ ಜೊತೆ ನಿಲ್ಲುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
#TeamIndia will be sporting camouflage caps today as mark of tribute to the loss of lives in Pulwama terror attack and the armed forces
And to encourage countrymen to donate to the National Defence Fund for taking care of the education of the dependents of the martyrs #JaiHind pic.twitter.com/fvFxHG20vi
— BCCI (@BCCI) March 8, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.