ಪುಣೆ: ಬಹಳ ವರ್ಷಗಳ ಹಿಂದೆಯೇ ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದು ಪುಣೆಯಲ್ಲಿ ನೆಲೆಸಿರುವ ಸುಮಾರು 45 ಮಂದಿಗೆ ಪುಣೆ ಜಿಲ್ಲಾಡಳಿತ ಭಾರತದ ಪೌರತ್ವವನ್ನು ನೀಡಿದೆ.
ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಂಡು ಭಯಭೀತಗೊಂಡು ಇವರು ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿದ್ದರು.
ಹಲವಾರು ವರ್ಷಗಳಿಂದ ಇವರು ಭಾರತ ನಾಗರಿಕತ್ವವನ್ನು ಪಡೆಯಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆದರೆ ನಾನಾ ಕಾರಣಗಳಿಂದಾಗಿ ಅದು ವಿಳಂಬವಾಗುತ್ತಿತ್ತು, ಇದೀಗ ಕೊನೆಗೂ ಪುಣೆ ಜಿಲ್ಲಾಡಳಿತ ಭಾರತೀಯ ಪೌರತ್ವವನ್ನು ಅವರಿಗೆ ನೀಡಿ ಅವರ ಮುಖದಲ್ಲಿ ನಗು ಬರುವಂತೆ ಮಾಡಿದೆ.
ನಾಗರಿಕತ್ವ ತಿದ್ದುಪಡಿ ಕಾಯ್ದೆಯ ಅನ್ವಯ, ಗುಪ್ತಚರ ಇಲಾಖೆಯ ಅನುಮೋದನೆಯನ್ನು ಪಡೆದುಕೊಂಡು ಪೌರತ್ವವನ್ನು 45 ಮಂದಿಗೆ ನೀಡಿರುವುದಾಗಿ ಪುಣೆ ಜಿಲ್ಲಾಧಿಕಾರಿ ನವಲ್ ಕಿಶೋರ್ ರಾಮ್ ತಿಳಿಸಿದ್ದಾರೆ.
ಪಾಕಿಸ್ಥಾನದಲ್ಲಿ ನಮಗೆ ಮನೆಯಿಂದ ಹೊರಗೆ ಕಾಲಿಡಲೂ ಭಯವಾಗುತ್ತಿತ್ತು, ಭಾರತಕ್ಕೆ 20 ವರ್ಷಗಳ ಹಿಂದೆ ಮದುವೆಗೆಂದು ಬಂದಿದ್ದೆವು, ಅಲ್ಲಿಂದ ಬಳಿಕ ಪಾಕಿಸ್ಥಾನಕ್ಕೆ ಮರಳುವ ಮನಸ್ಸಾಗಲಿಲ್ಲ ಎಂದು ಲಜ್ ವಿರ್ವಾನಿ ಎಂಬುವವರು ಹೇಳಿಕೊಂಡಿದ್ದಾರೆ.
ಪಾಕಿಸ್ಥಾನದಲ್ಲಿನ ಹಿಂದೂಗಳು ಅತ್ಯಂತ ಭಯಭೀತಗೊಂಡಿದ್ದಾರೆ, ಕಿಡ್ನ್ಯಾಪ್ ಇತ್ಯಾದಿಗಳಿಂದಾಗಿ ಮಕ್ಕಳನ್ನು ಮನೆಯಿಂದ ಹೊರಕ್ಕೆ ಕಳುಹಿಸುವುದೇ ಅಲ್ಲಿ ದುಸ್ತರವಾಗುತ್ತದೆ ಎಂದು ಓಂ ಪ್ರಕಾಶ್ ಎಂಬುವವರು ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.