ನವದೆಹಲಿ: ಅಸ್ಸಾಂನಲ್ಲಿನ ಸಿಎಂ ಸರ್ಬಾನಂದ್ ಸೋನಾವಾಲ್ ನೇತೃತ್ವದ ಬಿಜೆಪಿ ಸರ್ಕಾರ ಬಾಂಗ್ಲಾದೇಶದ ಅಕ್ರಮ ನಿವಾಸಿಗಳನ್ನು ವಾಪಾಸ್ ಕಳುಹಿಸುವ ಕಾರ್ಯವನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿದೆ. ಅಸ್ಸಾಂನ ಬುಡಕಟ್ಟು ಜನಾಂಗ ಪ್ರಾಬಲ್ಯದ ಜಿಲ್ಲೆ ಕರ್ಬಿ ಅಂಗ್ಲಾಂಗ್ನಿಂದ ಸುಮಾರು 1672 ಅಕ್ರಮ ಬಾಂಗ್ಲಾದೇಶಿಯರನ್ನು ಹೊರದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ವರದಿಯನ್ನು ಕರ್ಬಿ ಅಗ್ಲಾಂಗ್ ಸ್ವಾಯತ್ತ ಮಂಡಳಿಯ ಮುಖ್ಯಸ್ಥ ತುಲಿರಾಮ್ ರೊಂಘನ್ ಖಚಿತಪಡಿಸಿದ್ದಾರೆ.
ಅಕ್ರಮ ಬಾಂಗ್ಲಾದೇಶಿಯರ ಏರುತ್ತಿರುವ ಜನಸಂಖ್ಯೆ ಅಸ್ಸಾಂನ ಪ್ರಮುಖ ಸಮಸ್ಯೆಗಳಲ್ಲೊಂದಾಗಿತ್ತು. ಇವರನ್ನು ಹೊರಕ್ಕೆ ಕಳುಹಿಸುವ ಕಾರ್ಯಕ್ಕೆ ಎಡಪಂಥೀಯರ ವಿರೋಧ ಇದ್ದೇ ಇದೆ. ಆದರೆ ಈ ಬಾಂಗ್ಲಾ, ರೊಹಿಂಗ್ಯಾ ಅಕ್ರಮ ವಲಸಿಗರಿಂದಾಗಿ ಸ್ಥಳಿಯ ಅಸ್ಸಾಮಿಯರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇವರಿಂದಾಗಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿವೆ.
ಇದೀಗ ಸರ್ಬಾನಂದ್ ಅವರು ಈ ಅಕ್ರಮ ನಿವಾಸಿಗಳ ವಿರುದ್ಧ ಕ್ರಮ ಜರುಗಿಸುತ್ತಿದ್ದಾರೆ. ಅವರನ್ನು ತಮ್ಮ ರಾಜ್ಯದಿಂದ ಹೊರ ಕಳುಹಿಸುವ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ.
ಕಳೆದ ವರ್ಷ ಅಸ್ಸಾಂನಲ್ಲಿ ನಡೆಸಿದ ಎನ್ಆರ್ಸಿಯಲ್ಲಿ 3.29 ಕೋಟಿ ಜನಸಂಖ್ಯೆಯ ಪೈಕಿ 2.98 ಕೋಟಿ ಜನರು ಎನ್ಆರ್ಸಿಯೊಳಗೆ ಸೇರ್ಪಡೆಗೊಳ್ಳಲು ಅರ್ಹರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಉಳಿದ ಜನಸಂಖ್ಯೆಯ ಅಪಾರ ಪ್ರಮಾಣದ ಜನರು ಅಕ್ರಮ ವಲಸಿಗರಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.