ಡೆಹರಾಡೂನ್: ಉತ್ತರಾಖಂಡದ ರೈತರು ಮಾರಾಟವಾದ ಪ್ರತಿ ಕ್ವಿಂಟಲ್ ಗೋಧಿಗೆ 20 ರೂಪಾಯಿಗಳ ಬೋನಸ್ ಪಡೆಯಲಿದ್ದಾರೆ. ಅಲ್ಲಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಮಂಗಳವಾರ ಈ ಬಗ್ಗೆ ಘೋಷಣೆಯನ್ನು ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಗೋಧಿಗೆ ರೂಪಾಯಿ 1,840 ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಿತ್ತು. ಇದೀಗ ರಾವತ್ ಅವರು ಇದಕ್ಕೆ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್ ಗೋಧಿಗೆ 20 ರೂಪಾಯಿಗಳ ಬೋನಸ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ರಾವತ್ ಅವರು, ಪ್ರತಿ ಬ್ಯಾಗ್ ಗೋಧಿ ಖರೀದಿಯ ವೇಳೆ ರೈತರಿಗೆ 20 ರೂಪಾಯಿಗಳ ಬೋನಸನ್ನು ನೀಡುವಂತೆ ನಿರ್ದೇಶನ ನೀಡಲಾಗಿದೆ. ಕೇಂದ್ರ ಸರಕಾರವು ಪ್ರತಿ ಕ್ವಿಂಟಾಲ್ ಗೋಧಿಗೆ 1,840 ರೂಪಾಯಿಗಳ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ಇದೀಗ ಅದಕ್ಕೆ ಹೆಚ್ಚುವರಿಯಾಗಿ ಇಪ್ಪತ್ತು ರೂಪಾಯಿಗಳನ್ನು ನೀಡಲು ನಿರ್ಧರಿಸಲಾಗಿದೆ . ರೈತರಿಗೆ ತಕ್ಷಣವೇ ಬೆಳೆಯನ್ನು ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
गेहूं की खरीद पर किसानों को ₹20प्रति कुंतल बोनस देने के निर्देश दिये हैं। केन्द्र ने गेहूं का न्यूनतम समर्थन मूल्य 1840 रूपए प्रति क्विंटल निर्धारित किया है। इसमें 20 रुपए प्रति कुंतल बोनस भी दिया जायेगा। किसानों से क्रय किए जाने वाले गेहूं का तत्काल भुगतान सुनिश्चित किया जाएगा pic.twitter.com/Ronz1fnM8C
— Trivendra Singh Rawat त्रिवेंद्र सिंह रावत (@tsrawatbjp) March 5, 2019
ರೈತರಿಗೆ ಎಲ್ಲಾ ಪಾವತಿಗಳನ್ನು online ವ್ಯವಸ್ಥೆಯ ಮೂಲಕವೇ ಮಾಡಬೇಕು, ಅಲ್ಲದೇ ಬಾಕಿ ಇರುವ ಎಲ್ಲ ಪಾವತಿಗಳನ್ನು ತಕ್ಷಣವೇ ನೀಡಬೇಕು ಎಂದು ಸೂಚಿಸಿದ್ದಾರೆ. ಸರಕಾರವು ಎರಡು ಮಿಲಿಯನ್ ಟನ್ ಗೋಧಿಯನ್ನು ಈ ವರ್ಷ ಖರೀದಿ ಮಾಡಲು ನಿರ್ಧರಿಸಿದೆ, ಇದಕ್ಕಾಗಿ ಗೋಡೌನ್ ಸಂಖ್ಯೆಯನ್ನು ಹೆಚ್ಚಿಸಿ ಒಂದು ಮಿಲಿಯನ್ ಸಾಮರ್ಥ್ಯದ ಗೋಧಿಯನ್ನು ಸಂಗ್ರಹಿಸಲು ವ್ಯವಸ್ಥೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.