ನವದೆಹಲಿ: ದೇಶದಲ್ಲಿ ಪ್ರಸ್ತುತ ಇರುವ ಜನರ ಮನೋಭಾವಕ್ಕೆ ಅನುಗುಣವಾಗಿ ಏರ್ ಇಂಡಿಯಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ವಿಮಾನ takeoff ವೇಳೆ ಏರ್ ಇಂಡಿಯಾ ಸಿಬ್ಬಂದಿಗಳು ಜೈ ಹಿಂದ್ ಎಂದು ಘೋಷಣೆಯನ್ನು ಕೂಗಲಿದ್ದಾರೆ.
ಏರ್ ಇಂಡಿಯಾದ ಕಾರ್ಯಾಚರಣಾ ನಿರ್ದೇಶಕ ಅಮಿತಾಬ್ ಸಿಂಗ್ ಅವರು ಈ ಅಧಿಸೂಚನೆಯನ್ನು ಹೊರಡಿಸಿದ್ದು, ತಕ್ಷಣಕ್ಕೆ ಅನುಗುಣವಾಗುವಂತೆ ವಿಮಾನ ಹಾರಾಟದ ವೇಳೆ ಪ್ರಕಟಣೆ ಮಾಡುವ ಸಂದರ್ಭ ಏರ್ ಇಂಡಿಯಾ ಸಿಬ್ಬಂದಿಗಳು ಜೈ ಹಿಂದ್ ಎಂದು ಹೇಳಬೇಕಾಗಿ ತಿಳಿಸಿದ್ದಾರೆ.
2017 ರಲ್ಲೂ ಆಗಿನ ಏರ್ ಇಂಡಿಯಾ ಮುಖ್ಯಸ್ಥ ಅಶ್ವನಿ ಲೋಹಾನಿ ಅವರು ಇದೇ ರೀತಿಯ ನಿರ್ದೇಶನವನ್ನು ಜಾರಿಗೊಳಿಸಿದ್ದರು, ಇದೀಗ ಅಮಿತಾಬ್ ಅವರು ಅದನ್ನು ಮತ್ತೆ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ.
ವಿಮಾನ ವಿಳಂಬಗಳ ಸಂದರ್ಭಗಳಲ್ಲಿ ಪ್ರಯಾಣಿಕರು ಅತ್ಯಂತ ಕಠಿಣವಾಗಿ ಸಿಬ್ಬಂದಿಗಳೊಂದಿಗೆ ವರ್ತಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸಿಬ್ಬಂದಿಗಳು ಜೈ ಹಿಂದ್ ಎಂದು ಉದ್ಘೋಷ ಹಾಕಿದರೆ ಪರಿಸ್ಥಿತಿ ತಿಳಿಯಾಗಲು ಸಾಧ್ಯವಾಗುತ್ತದೆ ಎಂಬುದು ಲೋಹಿಯಾ ಅವರ ಅಭಿಪ್ರಾಯವಾಗಿತ್ತು. ಹೀಗಾಗಿ ವಿಮಾನ ಟೇಕ್ ಆಫ್ ಆಗುವುದಕ್ಕೂ ಮುನ್ನ ಫ್ಲೈಟ್ ಕಮಾಂಡರಗಳು ಜೈ ಹಿಂದ್ ಎಂದು ಘೋಷಣೆ ಹಾಕಿದರೆ ಉತ್ತಮ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.