ನವದೆಹಲಿ: ದೇಶ ಪುಲ್ವಾಮ ದಾಳಿಯ ಕಹಿ ನೆನಪಿನಲ್ಲಿ ಇರುವ ಸಂದರ್ಭದಲ್ಲೇ, ಸಮುದ್ರ ಮಾರ್ಗದ ಮೂಲಕ ಭಯೋತ್ಪಾದನಾ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಎಚ್ಚರಿಕೆಯನ್ನು ನೀಡಿದ್ದಾರೆ.
26/11ರ ಲಷ್ಕರ್ ಇ ತೋಯ್ಬಾದ ಮುಂಬಯಿ ದಾಳಿಯನ್ನು ಸ್ಮರಿಸಿದ ಅವರು, ಅವರು ಭಾರತವನ್ನು ಪ್ರವೇಶಿಸಿ ದೊಡ್ಡ ಮಟ್ಟದ ದಾಳಿಯನ್ನು ನಡೆಸಲು ಸಮುದ್ರ ಮಾರ್ಗವನ್ನು ಬಳಸಿಕೊಂಡು, ಇದರಿಂದಾಗಿ ಕರಾವಳಿಯನ್ನು ಕಾಯುವುದು ಅತ್ಯಂತ ಹೆಚ್ಚಿನ ಅಗತ್ಯವಾಗಿದೆ ಎಂದಿದ್ದಾರೆ.
‘ಭಾರತ ಒಂದು ರಾಷ್ಟ್ರಪ್ರಾಯೋಜಿತ ಭಯೋತ್ಪಾದನಾ ದಾಳಿಯ ದೊಡ್ಡ ಬಲಿಪಶುವಾಗಿದೆ, ಜಮ್ಮು ಕಾಶ್ಮೀರದಲ್ಲಿ ಕೇವಲ 3 ವಾರಗಳ ಹಿಂದೆ ನಾವು ಅತ್ಯಂತ ದೊಡ್ಡ ಮಟ್ಟದ ಹೇಯ ಕೃತ್ಯವನ್ನು ಸಾಕ್ಷೀಕರಿಸಿದ್ದೇವೆ. ಈ ಕೃತ್ಯವನ್ನು ಉಗ್ರಗಾಮಿಗಳು ಮಾಡುತ್ತಾರೆ, ಭಾರತದಲ್ಲಿ ಪ್ರಾಬಲ್ಯ ಬಯಸುವವ ಕೆಲವರು ಇವರಿಗೆ ಹಣ ಸಹಾಯ ಮಾಡುತ್ತಾರೆ’ ಎಂದು ಅವರು ಅಭಿಪ್ರಾಯಿಸಿದ್ದಾರೆ.
‘ಇಂಡೋ-ಪೆಸಿಫಿಕ್ ಭಾಗದಲ್ಲಿ ಭದ್ರತೆ ಅತೀ ಮುಖ್ಯ ಎಂದು ಒತ್ತಿ ಹೇಳಿದ ಅವರು, ‘ಇಂಡೋ-ಪೆಸಿಫಿಕ್ ಪ್ರದೇಶದ ಹಲವಾರು ವರ್ಷಗಳಿಂದ ವಿವಿಧ ರೀತಿಯ ಭಯೋತ್ಪಾದನೆಯನ್ನು ಸಾಕ್ಷ್ಯೀಕರಿಸಿದೆ. ಈ ಭಾಗದ ಹಲವು ದೇಶಗಳು ಇದರ ಅನುಭವವನ್ನು ಪಡೆದಿವೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಸ್ವಾಭಾವವನ್ನು ಭಯೋತ್ಪಾದನೆ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅದು ವೃದ್ಧಿಗೊಳ್ಳಲಿದೆ’ ಎಂದಿದ್ದಾರೆ.
ಪುಲ್ವಾಮ ದಾಳಿ ನಡೆದ ಬಳಿಕ ದೇಶದ ಶಸ್ತ್ರಾಸ್ತ್ರ ಪಡೆಗಳು ಹೈ ಅಲರ್ಟ್ನಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.