ಜೈಪುರ: ಶತ್ರು ರಾಷ್ಟ್ರ ಪಾಕಿಸ್ಥಾನದಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಈಗ ಭಾರತದ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ಅವರ ಸಾಹಸಗಾಥೆ ರಾಜಸ್ಥಾನದ ಶಾಲಾ ಪಠ್ಯದಲ್ಲಿ ಅಧ್ಯಾಯವಾಗಲಿದೆ.
ವೀರಪುತ್ರ ಅಭಿನಂದನ್ ಅವರ ಗೌರವಾರ್ಥವಾಗಿ ಅವರ ಸಾಹಸಗಾಥೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊಟಸ್ರ ಅವರು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಯಾವ ತರಗತಿಯ ಪಠ್ಯದಲ್ಲಿ ಅಭಿನಂದನ್ ಪಠ್ಯ ಇರಲಿದೆ ಎಂಬುದನ್ನು ಅವರು ತಿಳಿಸಿಲ್ಲ. ಈ ಪಠ್ಯಕ್ಕಾಗಿ ಸೂಕ್ತ ತರಗತಿಯನ್ನು ಆಯ್ಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಪಾಕಿಸ್ಥಾನದ ಎಫ್-16 ಯುದ್ಧವಿಮಾನವನ್ನು ಮಿಗ್-21 ಮೂಲಕ ಹೊಡೆದುರುಳಿಸಿದ ಅಭಿನಂದನ್ ಅವರು ಪ್ಯಾರಾಚೂಟ್ ಹಿಡಿದು ಪಾರಾಗುವ ವೇಳೆ ಪಾಕಿಸ್ಥಾನದ ನೆಲಕ್ಕೆ ಹೋಗಿ ಬಿದ್ದಿದ್ದರು. ಶತ್ರುಗಳ ನೆಲದಲ್ಲಿ ಯುದ್ಧ ಕೈದಿಯಾಗಿದ್ದ ಅವರು ಒಂದು ದಿನಗಳ ಬಳಿಕ ಭಾರತಕ್ಕೆ ವಾಪಾಸ್ಸಾಗಿದ್ದರು. ಶತ್ರುಗಳು ಎಷ್ಟೇ ಒತ್ತಡ ಹಾಕಿದರೂ ಒಂದೇ ಒಂದು ಮಾಹಿತಿಯನ್ನೂ ಅವರು ನೀಡಿರಲಿಲ್ಲ. ಈ ಘಟನೆ ನಡೆದ ಬಳಿಕ ಅವರು ಅಭಿನಂದನ್ ಅವರು ಭಾರತದ ಹೀರೋ ಆಗಿ ಮಿಂಚಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.