ನವದೆಹಲಿ: ಬಾಲಾಕೋಟ್ನಲ್ಲಿನ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಎಷ್ಟು ಮಂದಿ ಮೃತರಾಗಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಆದರೆ ಈ ನಿಟ್ಟಿನಲ್ಲಿ ಎನ್ಟಿಆರ್ಓ (ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಝೇಶನ್) ನೀಡಿದ ಮಾಹಿತಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಭಾರತ ವೈಮಾನಿಕ ದಾಳಿ ನಡೆಸುವ ವೇಳೆ ಅಥವಾ ಅದಕ್ಕೂ ತುಸು ಮುನ್ನ ಈ ಪ್ರದೇಶದಲ್ಲಿ ಸುಮಾರು 300 ಮೊಬೈಲ್ ಫೋನ್ಗಳು ಸಕ್ರಿವಾಗಿದ್ದವು ಎಂಬುದನ್ನು ಅದು ಸ್ಪಷ್ಟಪಡಿಸಿದೆ.
ಎನ್ಟಿಆರ್ಓ ಗುಪ್ತಚರ ಸಂಸ್ಥೆಗಳ ತಾಂತ್ರಿಕ ಕಣ್ಗಾವಲು ವಿಭಾಗವಾಗಿದೆ. ಪಾಕಿಸ್ಥಾನ ಖೈಬರ್ನ ಪಕ್ತುಂಕ್ವಾ ಪ್ರಾಂತ್ಯದ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಲು ವಾಯುಸೇನೆಗೆ ಅನುಮೋದನೆಯನ್ನು ನೀಡಿದ ಬಳಿಕ ಎನ್ಟಿಆರ್ಓ ಈ ಸೌಲಭ್ಯಗಳ ಮೇಲೆ ಕಣ್ಗಾವಲನ್ನು ಆರಂಭಿಸಿತ್ತು.
ಫೆ.26ರಂದು ವೈಮಾನಿಕ ದಾಳಿ ನಡೆದ ಸಂದರ್ಭ ಸುಮಾರು 300 ಮೊಬೈಲ್ ಫೋನ್ಗಳು ಸಕ್ರಿಯವಾಗಿದ್ದವು ಎಂಬ ಖಚಿತ ಮಾಹಿತಿಯನ್ನು ನೀಡುವ ಮೂಲಕ, ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆಯ ಬಗೆಗಿನ ಮಾಹಿತಿಯನ್ನೂ ನೀಡಿದೆ. ಪ್ರತಿಪಕ್ಷಗಳು ಸತ್ತ ಉಗ್ರರ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ ಎನ್ಟಿಆರ್ಓ ಮಾಹಿತಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
ಭಾರತವು ಮಿರಾಜ್-2000 ಯುದ್ಧ ವಿಮಾನದ ಮೂಲಕ ಪಾಕ್ನೊಳಗೆ ನುಗ್ಗಿ ಜೈಶೇ ಉಗ್ರ ಶಿಬಿರದ ಮೇಲೆ 1000 ಕೆಜಿ ಬಾಂಬ್ನ್ನು ಹಾಕಿತ್ತು. ಸುಮಾರು 300 ಉಗ್ರರು ಇದರಲ್ಲಿ ಮೃತರಾಗಿದ್ದಾರೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.