ಅಹ್ಮದಾಬಾದ್: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ವೈಮಾನಿಕ ದಾಳಿಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗುಜರಾತಿನಲ್ಲಿ ವಾಕ್ ಪ್ರಹಾರ ನಡೆಸಿದ್ದು, ಭಾರತೀಯ ಶಸ್ತ್ರಾಸ್ತ್ರ ಪಡೆಗಳ ಶೌರ್ಯದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಬಾರದಿತ್ತು ಎಂದಿದ್ದಾರೆ.
ಪಾಕಿಸ್ಥಾನಕ್ಕೆ ದಿಟ್ಟ ಸಂದೇಶವನ್ನು ರವಾನೆ ಮಾಡಿರುವ ಅವರು, ಶತ್ರುಗಳ ಮನೆಗೆ ನುಗ್ಗಿ ಹೊಡೆಯಿರಿ ಎಂಬುದು ನಮ್ಮ ಸರ್ಕಾರದ ಸಿದ್ಧಾಂತ ಎಂದಿದ್ದಾರೆ.
ಅಹ್ಮದಾಬಾದ್ನಲ್ಲಿ ಮಾತನಾಡಿದ ಅವರು, ಶತ್ರುಗಳ ಮನೆಗೆ ನುಗ್ಗಿ ಹೊಡೆಯುವುದು ನಮ್ಮ ಸಿದ್ಧಾಂತ, ಸಾಕಷ್ಟು ಸಮಯ ಕಾಯುತ್ತಾ ಕುಳಿತುಕೊಳ್ಳುವುದು ನಮ್ಮಿಂದ ಸಾಧ್ಯವಿಲ್ಲ. ಯಾವ ದೇಶವೂ ಅಂತಹ ಅಸಹಾಯಕತೆಯಲ್ಲಿ ಬದುಕಬಾರದು ಎಂದಿದ್ದಾರೆ.
‘ಪಾತಾಳದೊಳಗೆ ಉಗ್ರರು ಅಡಗಿ ಕುಳಿತಿದ್ದರೂ ಭಾರತೀಯ ಸೇನೆ ಅವರನ್ನು ಬೇಟಿಯಾಡಲಿದೆ, ಲೆಕ್ಕ ಹಾಕಿ ಪ್ರತ್ಯುತ್ತರ ನೀಡುವುದು ನಮ್ಮ ಸ್ವಭಾವವಾಗಿದೆ, ಅದು ಅವರು ಪಾತಾಳದಲ್ಲಿ ಅಡಗಿಕೊಂಡಿದ್ದರೂ ಸರಿಯೇ’ ಎಂದಿದ್ದಾರೆ.
‘ಪ್ರತಿಪಕ್ಷಗಳ ವಿರುದ್ಧ ವಾಕ್ ಪ್ರಹಾರ ನಡೆಸಿದ ಅವರು, ಭಾರತೀಯ ವಾಯುಸೇನೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಇವರುಗಳ ಹೇಳಿಕೆ ಪಾಕಿಸ್ಥಾನದಲ್ಲಿ ಹೆಡ್ಲೈನ್ ಆಗುತ್ತಿದೆ ಮತ್ತು ಅದನ್ನು ಅಲ್ಲಿನ ಸಂಸತ್ತಿನಲ್ಲಿ ಸಂಭ್ರಮಿಸಲಾಗುತ್ತಿದೆ ಎಂದಿದ್ದಾರೆ. ನೀವು ದೇಶದ ಹಿತಾಸಕ್ತಿಯನ್ನು ಕಾಪಾಡುವ ರೀತಿಯೇ ಇದು? ನೀವು ನನ್ನ ರಾಜಕೀಯವನ್ನು ಪ್ರಶ್ನೆ ಮಾಡಬಹುದು, ನೀವು ನನ್ನನ್ನು ನಂಬದೇ ಇರಬಹುದು, ಆದರೆ ಕನಿಷ್ಠ ಪಕ್ಷ ಶಸ್ತ್ರಾಸ್ತ್ರ ಪಡೆಗಳನ್ನಾದರೂ ನಂಬಿ, ಅವರ ಶೌರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಬೇಡಿ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.