ಕೋಟಾ : ಕೋಟಾದ ಅಂಧ ವಿಜ್ಞಾನಿಯೊಬ್ಬರು ಪುಲ್ವಾಮಾ ದಾಳಿಯ ಹುತಾತ್ಮರ ಕುಟುಂಬಗಳಿಗೆ 110 ಕೋಟಿ ನೆರವು ನೀಡಲು ಮುಂದಾಗಿದ್ದಾರೆ.
ಕೋಟಾ ಮೂಲದವರಾದ, ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಸಂಶೋಧಕ ಹಾಗೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ 44 ವರ್ಷದ ಮುರ್ತಾಜಾ ಎ. ಹಮೀದ್ ಅವರು ಹುಟ್ಟಿನಿಂದಲೇ ಅಂಧರಾಗಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕುಟುಂಬದವರಿಗೆ 110 ಕೋಟಿ ರೂ. ನೆರವು ನೀಡಲು ಮುಂದಾಗಿದ್ದು, ಈ ಕುರಿತು ಪ್ರಧಾನಿ ಕಛೇರಿಗೆ ಇ-ಮೇಲ್ ಕಳುಹಿಸಿದ್ದು, ಪ್ರಧಾನಿಯವರ ಭೇಟಿಗಾಗಿ ಅವಕಾಶ ಕೇಳಿದ್ದಾರೆ.
ವರದಿಗಳ ಪ್ರಕಾರ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಉಪಕಾರ್ಯದರ್ಶಿ ಅಗ್ನಿ ಕುಮಾರ್ ದಾಸ್ ಅವರು ಹಮೀದ್ ಅವರಿಗೆ ಕರೆ ಮಾಡಿ ತಮ್ಮ ವಿವರವನ್ನು ಕಳುಹಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ತಮ್ಮ ಕುಟುಂಬದವರಿಂದ ದೂರವಿದ್ದು, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೇಶಕ್ಕಾಗಿ ತಮ್ಮ ಜೀವವನ್ನು ಮುಡಿಪಾಗಿಡುವ ಯೋಧರ ಕುಟುಂಬಕ್ಕೆ ನೆರವಾಗಬೇಕೆಂಬುದು ನನ್ನ ಇಚ್ಛೆ. ದೇಶದ ಪ್ರತಿಯೊಬ್ಬರೂ ಯೋಧರ ನೆರವಿಗೆ ನಿಲ್ಲಬೇಕು. ನನ್ನಿಂದ ಆದಷ್ಟು ಸಹಾಯ ಮಾಡುವ ದೃಷ್ಟಿಯಿಂದ ನೆರವು ನೀಡಲು ಮುಂದಾಗಿದ್ದೇನೆ. ಸೈನಿಕರು ನಮಗೆ ಸ್ಪೂರ್ತಿ ಎಂದಿದ್ದಾರೆ.
Fuel Burn Radiation Technology ಮೂಲಕ ಜಿ.ಪಿ.ಎಸ್. ಹಾಗೂ ಕ್ಯಾಮರಾ ಸೌಲಭ್ಯವಿಲ್ಲದ ವಾಹನಗಳನ್ನು ಪತ್ತೆ ಮಾಡಬಹುದಾದ ತಂತ್ರಜ್ಞಾನವನ್ನು ಕಂಡು ಹಿಡಿದಿರುವ ಇವರು ಸೆಪ್ಟೆಂಬರ್ 2016 ರಲ್ಲಿ ಇದನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಉಚಿತವಾಗಿ ನೀಡಿದ್ದರು. ಸೆಪ್ಟೆಂಬರ್ 2018 ರಲ್ಲಿ ಈ ತಂತ್ರಜ್ಞಾನಕ್ಕೆ ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿತ್ತು.
ಕಾಮರ್ಸ್ನಲ್ಲಿ ಪದವೀಧರರಾಗಿರುವ ಇವರಿಗೆ, ಒಮ್ಮೆ 2010 ರಲ್ಲಿ ಯಾರೋ ಒಬ್ಬರು ಜೈಪುರದ ಪೆಟ್ರೋಲ್ ಬಂಕ್ನಲ್ಲಿ ಮೊಬೈಲ್ನಲ್ಲಿ ತನಾಡುತ್ತಿದ್ದಾಗ ಸಂಭವಿಸಿದ ಬೆಂಕಿ ಅಪಘಾತಕ್ಕೆ ಕಾರಣವೇನಿರಬಹುದು ಎಂಬುದೇ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು. ಈ ಮೂಲಕ ಅವರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತಮ್ಮ ಸಂಶೋಧನೆಯನ್ನು ಮಾಡಲಾರಂಭಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.