ಜೈಪುರ : ವೈದ್ಯರುಗಳ ಪ್ರಕಾರ ನಮ್ಮ ದೇಶದಲ್ಲಿ ಅಸಮರ್ಥತೆಗೆ ಎರಡನೇ ಪ್ರಮುಖ ಕಾರಣ ಶ್ರವಣದೋಷ. ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 63 ಮಿಲಿಯನ್ ಜನರು ಕಿವುಡುತನದಿಂದ ಬಳಲುತ್ತಿದ್ದಾರೆ. ಒಂಬತ್ತು ವರ್ಷದ ಜೈಪುರ ಬಾಲಕಿ ಅನಿಷಾ ಕೂಡ ಮಾತಿನ ಸಮಸ್ಯೆಯಿಂದ, ಶ್ರವಣದೋಷದಿಂದ ಬಳಲುತ್ತಿದ್ದಾಳೆ. ತನ್ನ ನಾಲ್ಕನೇ ವಯಸ್ಸಿನಲ್ಲಿ ಕೊಹ್ಲರ್ ಇಂಪ್ಲಾಂಟ್ಗೆ ಒಳಗಾಗಿದ್ದಾಳೆ. ಕಿವಿ ಕೇಳದ್ದಕ್ಕೆ ಒಂದು ಡಿವೈಸ್ ಅಳವಡಿಸುವ ಶಸ್ತ್ರ ಚಿಕಿತ್ಸೆ ಇದಾಗಿದೆ. ಆದರೆ ಮೊನ್ನೆ ಶನಿವಾರ ವಿಶ್ವ ಶ್ರವಣ ದಿನದ (World Hearing Day) ಅಂಗವಾಗಿ ನಡೆದ ಕಥೆ ಹೇಳುವ ಸ್ಪರ್ಧೆಯಲ್ಲಿ ಈಕೆ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ ಮಾತ್ರವಲ್ಲ, ಘೋಷಣೆ ಹಾಡುವ ಸ್ಪರ್ಧೆಯಲ್ಲೂ ಈಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ.
ಹಿಯರಿಂಗ್ ಡಿವೈಸ್ನ್ನು ಅನಿಷಾಗೆ ಅಳವಡಿಸಿದ ಬಳಿಕ ಆಕೆ ತನ್ನ ವಯಸ್ಸಿನ ಮಕ್ಕಳೊಂದಿಗೆ ಯಾವುದೇ ಸಮಸ್ಯೆ ಇಲ್ಲದೆಯೇ ಸಂವಹನವನ್ನು ನಡೆಸುತ್ತಿದ್ದಾಳೆ ಎಂದು ಆಕೆಯ ಶಿಕ್ಷಕಿ ತಾಯಿ ಅನುರಾಧಾ ಹೇಳಿದ್ದಾರೆ. ಪ್ರಸ್ತುತ ಅನಿಶಾ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದು ಆಕೆಗೆ ಶ್ರವಣ ದೋಷ ಇದೆ ಎಂಬುದನ್ನು ಆಕೆ ಎರಡು ವರ್ಷದವಳಿದ್ದಾಗ ಪೋಷಕರ ಅರಿವಿಗೆ ಬಂತು.
ಅಜ್ಮೇರದಲ್ಲಿ ಇದ್ದು, ಅಲ್ಲಿ ಆಕೆಯ ಸಮಸ್ಯೆಯನ್ನು ನೀಗಿಸುವ ಯಾವುದೇ ವೈದ್ಯಕೀಯ ಸೌಲಭ್ಯಗಳು ಇರಲಿಲ್ಲ. ಬಳಿಕ ಜೈಪುರದಲ್ಲಿ 2010ರಲ್ಲಿ ಆಕೆಗೆ ಹೀಯರಿಂಗ್ ಡಿವೈಸ್ನ್ನು ಎಸ್ಎಂಎಸ್ ಆಸ್ಪತ್ರೆಯಲ್ಲಿ Cochlear Implant Programme ನಲ್ಲಿ ಉಚಿತವಾಗಿ ಅಳವಡಿಸಲಾಯಿತು. ಬಳಿಕ ಸರ್ಕಾರದ ನೆರವಿನೊಂದಿಗೆ ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳಲ್ಲೂ ಉಚಿತ ಹೀಯರಿಂಗ್ ಡಿವೈಸ್ ಅಳವಡಿಸುವ ಕಾರ್ಯ ಆರಂಭಗೊಂಡಿತು.
ಪ್ರಸ್ತುತ ಜೋಧ್ಪುರ, ಬಿಕನೇರ್, ಕೋಟ ಮೆಡಿಕಲ್ ಕಾಲೇಜುಗಳಲ್ಲೂ ಈ ಸೌಲಭ್ಯ ಇದೆ. 615 ಕ್ಕೂ ಅಧಿಕ ಡಿವೈಸ್ಗಳನ್ನು ವಾರ್ಷಿಕವಾಗಿ ಮಕ್ಕಳಿಗೆ, ವಯಸ್ಕರಿಗೆ ಇಲ್ಲಿ ಅಳವಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.