ನವದೆಹಲಿ: ಪಾಕಿಸ್ಥಾನದ ಬಂಧನದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಇನ್ನು ಮುಂದೆ ನಿಘಂಟಿನಲ್ಲಿ ’ಅಭಿನಂದನ್’ ಶಬ್ದದ ಅರ್ಥವೇ ಬದಲಾಗಲಿದೆ ಎಂದಿದ್ದಾರೆ.
‘ಭಾರತ ಏನು ಮಾಡುತ್ತಿದೆ ಎಂಬ ಬಗ್ಗೆ ಜಗತ್ತು ಬೆರಗು ಕಣ್ಣಿನಿಂದ ನೋಡುತ್ತಿದೆ. ನಿಘಂಟಿನಲ್ಲಿನ ಶಬ್ದವನ್ನು ಬದಲಿಸುವ ತಾಕತ್ತು ಭಾರತಕ್ಕಿದೆ. ಅಭಿನಂದನ್ಗೆ ಇಂಗ್ಲೀಷಿನಲ್ಲಿ ’ಕಂಗ್ರಾಜುಲೇಷನ್’ ಎಂದು ಹೇಳಲಾಗುತ್ತದೆ. ಆದರೆ ಇನ್ನು ಮುಂದೆ ಈ ಶಬ್ದದ ಅರ್ಥವೇ ಬದಲಾಗಲಿದೆ’ ಎಂದಿದ್ದಾರೆ.
ಇಂದು ನವದೆಹಲಿಯ ವಿಗ್ಯಾನ್ ಭವನದಲ್ಲಿ ನಿರ್ಮಾಣ ತಂತ್ರಜ್ಞಾನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನಮ್ಮ ಅಧಿಕಾರ ಅವಧಿಯಲ್ಲಿ 1.3 ಕೋಟಿ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಯುಪಿಎ ಕೇವಲ 23 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು. ಈ ಸಂಖ್ಯೆಗಳೇ ಎಲ್ಲವನ್ನೂ ಹೇಳುತ್ತದೆ’ ಎಂದಿದ್ದಾರೆ.
‘ನಗರೀಕರಣ ವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಮನೆಯೆಂದರೆ ಕೇವಲ ಗೋಡೆಗಳಲ್ಲ, ಅಲ್ಲಿಂದಲೇ ಕನಸು ಮತ್ತು ಆಶೋತ್ತರಗಳು ಚಿಗುರುತ್ತವೆ’ ಎಂದಿದ್ದಾರೆ. 2020ರ ವೇಳೆ ಎಲ್ಲರಿಗೂ ಮನೆಯನ್ನು ನಿರ್ಮಿಸಿಕೊಡುವುದು ನಮ್ಮ ಕನಸು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.