ನವದೆಹಲಿ: ಕುತಂತ್ರಗಳನ್ನು ಮಾಡುವುದಕ್ಕೆ ಹೆಸರಾಗಿರುವ ಪಾಕಿಸ್ಥಾನ ಐಎಸ್ಐ ಭಾರತದ ವಿರುದ್ಧ ಮತ್ತೊಂದು ದೊಡ್ಡ ಸಂಚನ್ನು ರೂಪಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಪೂರೈಕೆಯಾಗುವ ಆಹಾರ ಸಾಮಾಗ್ರಿಗಳಿಗೆ ವಿಷ ಬೆರೆಸುವ ಮಹಾನ್ ಘಾತುಕ ಕುತಂತ್ರವನ್ನು ಅದು ಹೆಣೆಯುತ್ತಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.
ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳಿಗೆ ಪೂರೈಕೆಯಾಗುತ್ತಿರುವ ಪಡಿತರಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ, ಭಾರತದ ಮೂಲೆ ಮೂಲೆಯಿಂದ ಪೂರೈಕೆಯಾಗುವ ಆಹಾರ ಸಾಮಾಗ್ರಿಗಳನ್ನು ಹಲವಾರು ಹಂತದಲ್ಲಿ ಪರಿಶೀಲನೆಗೊಳಪಡಿಸಿಯೇ ಸೈನಿಕರಿಗೆ ನೀಡಲು ನಿರ್ಧರಿಸಲಾಗಿದೆ.
ಪುಲ್ವಾಮ ದಾಳಿಯ ಕಹಿ ಘಟನೆಯ ನೆನಪಲ್ಲಿ ದೇಶ ಇರುವ ಸಂದರ್ಭದಲ್ಲೇ ಇಂತಹ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ನೀಡಿದ್ದು, ಎಲ್ಲರಲ್ಲೂ ಆತಂಕವನ್ನು ಸೃಷ್ಟಿಸಿದೆ. ಭಾರತದ ದಾಳಿಗೆ ತತ್ತರಿಸಿರುವ ಪಾಕಿಸ್ಥಾನ ಮತ್ತು ಅದರ ಐಎಸ್ಐ ಇಂತಹದೊಂದು ಕುತಂತ್ರಕ್ಕೆ ಕೈ ಹಾಕಿದರೂ ಅಚ್ಚರಿಪಡಬೇಕಾಗಿಲ್ಲ. ಯಾವುದಕ್ಕೂ ಭಾರತ ಸೈನಿಕರ ಆಹಾರದ ವಿಷಯದಲ್ಲಿ ಯಾವುದೇ ಲೋಪದೋಷವಾಗದಂತೆ ನೋಡಿಕೊಳ್ಳಬೇಕು.
ಜೈಶೇ ಉಗ್ರರು ಭಾರತದ ವಿರುದ್ಧ ಮತ್ತಷ್ಟು ಮಾಹಿತಿಗಳನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ನೀಡಿದ ಹಿನ್ನಲೆಯಲ್ಲಿ ಭಾರತ ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಬಾಲಾಕೋಟ್ನಲ್ಲಿ ವೈಮಾನಿಕ ದಾಳಿಯನ್ನು ನಡೆಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.