ಶ್ರೀನಗರ: ಕಾಶ್ಮೀರದಲ್ಲಿ ಜಮಾತ್ ಇ ಇಸ್ಲಾಮಿ ಸಂಘಟನೆಯನ್ನು ಹತ್ತಿಕ್ಕುವ ಕಾರ್ಯ ಭರದಿಂದ ಸಾಗಿದೆ, ಕಿಸ್ತ್ವಾರ ಪ್ರದೇಶದಿಂದ ಮತ್ತೆ ಮೂರು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ, ಕಳೆದ ವಾರ ಶ್ರೀನಗರದಿಂದ ಇದರ ಉನ್ನತ ನಾಯಕರನ್ನು ಬಂಧಿಸಲಾಗಿತ್ತು.
ಈ ಸಂಘಟನೆಗೆ ಸೇರಿದ ಸುಮಾರು 70 ಬ್ಯಾಂಕ್ ಅಕೌಂಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನೂ ಹಲವಾರು ಖಾತೆಗಳು ಸರ್ಕಾರದ ಪರಿಶೀಲನೆಯಲ್ಲಿದೆ. ಜಮಾತ್ಗೆ ಸೇರಿದ ಸುಮಾರು 52 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮುಂದಿನ ವಾರ ಕಲಂ 370ರ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಈ ಪ್ರತ್ಯೇಕತಾವಾದಿ ಸಂಘಟನೆಗೆ ಸೇರಿದ ಸುಮಾರು 200 ಮಂದಿಯನ್ನು ಕಸ್ಟಡಿಯಲ್ಲಿ ಇಡಲಾಗಿದೆ.
ಜಮಾತ್ ಇ ಇಸ್ಲಾಮಿ ಸಂಘಟನೆಗೆ ಸೇರಿದ ಆಸ್ತಿಗಳಿಗಳನ್ನು ಪತ್ತೆ ಮಾಡಲು ಜಮ್ಮು ಕಾಶ್ಮೀರದಾದ್ಯಂತ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಈ ಸಂಘಟನೆಯು ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿಯ ತೆಹ್ರೀಕ್ ಇ ಹುರಿಯತ್ ಪಕ್ಷದ ಭಾಗವಾಗಿದೆ. ಜಮಾತ್ ಸಂಘಟನೆಯನ್ನು ಹತ್ತಿಕ್ಕುತ್ತಿರುವ ಕಾರ್ಯವನ್ನು ಗಿಲಾನಿ ಕಟುವಾಗಿ ಖಂಡಿಸಿದ್ದಾನೆ.
ಜಮಾತ್ ಸಂಘಟನೆಯನ್ನು ನಿಷೇಧಿಸಿ ಶುಕ್ರವಾರ ಕೇಂದ್ರ ಸಂಪುಟ ಅನುಮೋದನೆಯನ್ನು ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.