ವಾಘಾ: ಕೊನೆಗೂ ಭಾರತೀಯರ ಪ್ರಾರ್ಥನೆ ಫಲ ನೀಡಿದೆ. ಭಾರತ ಮಾತೆಯ ಹೆಮ್ಮೆಯ ಸುಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ತಾಯ್ನಾಡಿಗೆ ಮರಳಿದ್ದಾರೆ. ಪಂಜಾಬ್ನ ವಾಘಾ ಗಡಿಯ ಮೂಲಕ ಪಾಕಿಸ್ಥಾನ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿದೆ.
ಬೆಳಗ್ಗಿನಿಂದಲೇ ವಾಘಾ ಗಡಿಯಲ್ಲಿ ಅಭಿನಂದನ್ ಅವರನ್ನು ಸ್ವಾಗತಿಸಲು ಜನ ಸಾಗರವೇ ನೆರೆದಿದ್ದು, ರಾಷ್ಟ್ರಧ್ವಜ ಹಿಡಿದು ಭಾರತ್ ಮಾತಾ ಕಿ ಜೈ, ಜೈ ಹಿಂದ್ ಘೋಷಣೆಗಳನ್ನು ಕೂಗುತ್ತಾ ಎಲ್ಲರೂ ತಮ್ಮ ವೀರ ಯೋಧನ ಆಗಮನಕ್ಕಾಗಿ ಕಾಯುತ್ತಿದ್ದರು. ಅಭಿನಂದನ್ ಬಂದಿಳಿಯುತ್ತಿದ್ದಂತೆ ಎಲ್ಲರೂ ಘೋಷ ವಾಕ್ಯಗಳನ್ನು ಕೂಗುತ್ತಾ ಅವರನ್ನು ಸ್ವಾಗತಿಸಿದರು.
5.20 ಕ್ಕೆ ಪಾಕ್ ಅಧಿಕಾರಿಗಳು ಅಭಿನಂದನ್ ಅವರನ್ನು ಬಿಎಸ್ಎಫ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ನಂತರ, ಬಿಎಸ್ಎಫ್ ಅಧಿಕಾರಿಗಳು ವಾಯುಪಡೆ ಅಧಿಕಾರಿಗಳಿಗೆ ಅಭಿನಂದನ್ ಅವರನ್ನು ಹಸ್ತಾಂತರ ಮಾಡಿದರು. ಅಭಿನಂದನ್ ಅವರನ್ನು ಅಮೃತಸರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಿಕ ಐಎಫ್ಎಫ್ ವಿಮಾನದ ಮೂಲಕ ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು.
35 ವರ್ಷದ ವಿಂಗ್ ಕಮಾಂಡರ್ ಬುಧವಾರದಿಂದ ಪಾಕಿಸ್ಥಾನದ ವಶದಲ್ಲಿದ್ದರು. ಭಾರತೀಯ ವಾಯುನೆಲೆಯನ್ನು ಆಕ್ರಮಿಸಲು ಬಂದ ಪಾಕಿಸ್ಥಾನ ಎಫ್-16 ಜೆಟ್ನ್ನು ಹಿಂಬಾಲಿಸಿ ಹೊಡೆದುರುಳಿಸಿದ ವೇಳೆ ಅವರ ಮಿಗ್-21 ಪತನಗೊಂಡಿತ್ತು. ಈ ವೇಳೆ ಪ್ಯಾರಚೂಟ್ ಮೂಲಕ ಹಾರಿದ ಅವರು ಪಾಕಿಸ್ಥಾನ ಭಾಗಕ್ಕೆ ಬಂದು ಬಿದ್ದಿದ್ದರು. ಅಲ್ಲಿ ಅವರನ್ನು ಪಾಕ್ ಸೈನಿಕರು ವಶಕ್ಕೆ ಪಡೆದುಕೊಂಡಿದ್ದರು.
ಪಾಕಿಸ್ಥಾನ ಅವರನ್ನು ಮುಂದಿಟ್ಟುಕೊಂಡು ಆಟವಾಡುವ ಪ್ರಯತ್ನ ಮಾಡಲು ನೋಡಿದರೂ, ಕೊನೆಗೆ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ಥಾನ ಜಿನೇವಾ ಒಪ್ಪಂದದ ಪ್ರಕಾರ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿದೆ. ಇದು ಭಾರತಕ್ಕೆ ರಾಜತಾಂತ್ರಿಕ ಜಯವೆಂದೇ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.