ನವದೆಹಲಿ: ಭಾರತದ ವಿರುದ್ಧ ನಡೆದ ವಿವಿಧ ದಾಳಿಗಳ ಮಾಸ್ಟರ್ ಮೈಂಡ್, ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ನಮ್ಮ ದೇಶದಲ್ಲೇ ಇದ್ದಾನೆ ಎಂಬುದನ್ನು ಪಾಕಿಸ್ಥಾನ ಕೊನೆಗೂ ಒಪ್ಪಿಕೊಂಡಿದೆ. ಆದರೆ ಆತನಿಗೆ ಆರೋಗ್ಯ ಸರಿಯಿಲ್ಲ, ಮನೆಯಿಂದ ಹೊರಬಾರದ ಸ್ಥಿತಿಯಲ್ಲಿ ಆತನಿದ್ದಾನೆ ಎಂದಿದೆ.
ಸಿಎನ್ಎನ್ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿ ಅವರು ಮಸುದ್ ಅಝರ್ ನಮ್ಮಲ್ಲೇ ಇದ್ದಾನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಪಾಕಿಸ್ಥಾನದ ನ್ಯಾಯಾಲಯಗಳು ಒಪ್ಪುವಂತೆ ಭಾರತ ಆತನ ವಿರುದ್ಧ ಸಾಕ್ಷಿಗಳನ್ನು ಒದಗಿಸಿದರೆ ಕ್ರಮಕೈಗೊಳ್ಳುತ್ತೇವೆ ಎಂದು ತಮ್ಮ ಹಳೆಯ ಹೇಳಿಕೆಯನ್ನೇ ಪುನರುಚ್ಛರಿಸಿದ್ದಾರೆ.
2001ರ ಸಂಸತ್ತು ದಾಳಿ, 2016ರ ಪಠಾನ್ಕೋಟ್ ವಾಯುನೆಲೆ ದಾಳಿ, ಪುಲ್ವಾಮ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ಸೇರಿದಂತೆ ಹಲವಾರು ಭಾರತ ವಿರೋಧಿ ದಾಳಿಗಳ ಹಿಂದೆ ಮಸೂದ್ ಅಝರ್ನ ಜೈಶೇ ಇ ಮೊಹಮ್ಮದ್ ಸಂಘಟನೆಯ ಕೈವಾಡವಿದೆ. ಇದು ಉಭಯ ದೇಶಗಳ ನಡುವಣ ಸಂಬಂಧಕ್ಕೆ ತೀವ್ರ ಧಕ್ಕೆಯನ್ನು ಉಂಟು ಮಾಡುತ್ತಿದೆ.
ಈ ಬಗ್ಗೆ ಹಲವಾರು ಸಾಕ್ಷಿಗಳು ಪಾಕಿಸ್ಥಾನಕ್ಕೆ ನೀಡಿದರೂ ಅದು ಮಸೂದ್ ಅಝರ್ ವಿರುದ್ಧವಾಗಲಿ, ಜೈಶೇ ವಿರುದ್ಧವಾಗಲಿ ಕ್ರಮವನ್ನು ಕೈಗೊಂಡಿಲ್ಲ. ಇದರಿಂದ ಪಾಕಿಸ್ಥಾನದೊಳಕ್ಕೆ ನುಗ್ಗಿ ವೈಮಾನಿಕ ದಾಳಿಯನ್ನು ನಡೆಸುವ ಅನಿವಾರ್ಯತೆ ಭಾರತಕ್ಕೆ ಉಂಟಾಗಿತ್ತು. ಭಾರತದ ದಾಳಿಯಲ್ಲಿ ಜೈಶೇಯ ಪ್ರಮುಖ ಶಿಬಿರಗಳು ಸರ್ವನಾಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.