ಶ್ರೀನಗರ: ವೈಮಾನಿಕ ದಾಳಿಯ ಬಳಿಕ ವಿಚಲಿತಗೊಂಡಿರುವ ಪಾಕಿಸ್ಥಾನ ಮೂಲದ ಉಗ್ರರು ಗಡಿಯಲ್ಲಿ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಇವರ ಉಪಟಳವನ್ನು ಹತ್ತಿಕ್ಕಲು ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಭದ್ರತಾ ಪಡೆಗಳು ಶುಕ್ರವಾರ ಎನ್ಕೌಂಟರ್ ಆರಂಭಿಸಿದ್ದು, ಇದರಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ.
ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ಕೌಂಟರ್ ನಡೆದಿದ್ದು, ಇದರಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇವರ ಶವಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಸ್ತುತ ಎನ್ಕೌಂಟರ್ ನಿಂತಿದ್ದು, ಪರಾರಿಯಾದ ಉಗ್ರರ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಉಗ್ರರ ವಿರುದ್ಧ ಆಪರೇಷನ್ ಆಲ್ಔಟ್ ಪ್ರಾರಂಭವಾಗಿದ್ದು, ಉಗ್ರರನ್ನು ಹುಡುಕಿ ಹುಡುಕಿ ಭಾರತೀಯ ಸೇನೆ ಹತ್ಯೆಗೈಯ್ಯುತ್ತಿದೆ.
ಕುಪ್ವಾರದ ಬಾಬಾಗುಂಡ್ ಮತ್ತು ಕ್ರಲ್ಗುಂಡ್ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿತ್ತು. ಸಿಆರ್ಪಿಎಫ್, ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ರಾತ್ರಿ 1 ಗಂಟೆಯಿಂದ ಎನ್ಕೌಂಟರ್ ಆರಂಭಿಸಿತ್ತು. ಹತ್ಯೆಯಾದ ಉಗ್ರರ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಮೂಲಗಳ ಪ್ರಕಾರ ಕಳೆದೆರಡು ದಿನಗಳಲ್ಲಿ 35 ಬಾರಿ ಕದನವಿರಾಮ ಉಲ್ಲಂಘನೆ ನಡೆದಿದೆ. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿ ಉಗ್ರರನ್ನು ಮಟ್ಟ ಹಾಕುತ್ತಿದೆ.
ಕಾರ್ಯಾಚರಣೆಯಲ್ಲಿ ಯಾವುದೇ ಹಾನಿಗಳು ಸಂಭವಿಸಿಲ್ಲ, ಪ್ರದೇಶದಲ್ಲಿ ಇಂಟರ್ನೆಟ್ನ್ನು ಸ್ಥಗಿತಗೊಳಿಸಲಾಗಿದೆ.
ಬೃಹತ್ ವೈಮಾನಿಕ ದಾಳಿಯನ್ನು ನಡೆಸಿ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರವನ್ನು ಭಾರತ ಹತ್ತಿಕ್ಕಿದ ಬಳಿಕ ಭಾರತದ ವಿರುದ್ಧ ಮತ್ತಷ್ಟು ದಾಳಿಗಳನ್ನು ನಡೆಸಲು ಉಗ್ರರು ಹವಣಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಗಡಿಯುದ್ದಕ್ಕೂ ಹೈಅಲರ್ಟ್ಗಳನ್ನು ಘೋಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.