ನವದೆಹಲಿ: ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಬುಧವಾರ ಆಂಧ್ರಪ್ರದೇಶಕ್ಕೆ ಹೊಸ ರೈಲ್ವೇ ವಲಯವನ್ನು ಘೋಷಣೆ ಮಾಡಿದ್ದಾರೆ. ಆಂಧ್ರದ ಬಿಜೆಪಿ ಶಾಸಕರು ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಮರುದಿನವೇ ಅವರು ಈ ಘೋಷಣೆಯನ್ನು ಮಾಡಿದ್ದಾರೆ.
ಸದರ್ನ್ ಕೋಸ್ಟ್ ರೈಲ್ವೇ- ಹೊಸ ರೈಲ್ವೇ ವಲಯವಾಗಿದ್ದು, ವಿಶಾಖಪಟ್ಟಣದಲ್ಲಿ ಕೇಂದ್ರ ಕಛೇರಿಯನ್ನು ಹೊಂದಲಿದೆ. ಇದು ದೇಶದ 18ನೇ ರೈಲ್ವೇ ವಲಯವಾಗಲಿದೆ ಎಂದು ಗೋಯಲ್ ಹೇಳಿದ್ದಾರೆ.
ಈ ಹೊಸ ವಲಯವು ಗುಂಟಕಲ್, ಗುಂಟೂರು, ವಿಜಯವಾಡ ಡಿವಿಜನ್ಗಳನ್ನು ಒಳಗೊಳ್ಳಲಿದೆ, ಪ್ರಸ್ತುತ ಇದು ಸೌತ್ ಸೆಂಟ್ರಲ್ ರೈಲ್ವೇ ವಲಯದಲ್ಲಿದೆ.
‘ಆಂಧ್ರಪ್ರದೇಶದ ಮರುಸಂಘಟನಾ ಕಾಯ್ದೆ 2014ರ ಪರಿಚ್ಛೇದ 13(ಮೂಲಸೌಕರ್ಯ)ದ 8ನೇ ವಿಧಿಯಡಿ ಆಂಧ್ರದಲ್ಲಿ ಹೊಸ ರೈಲ್ವೇ ವಲಯವನ್ನು ಸ್ಥಾಪನೆ ಮಾಡುವ ಬಗ್ಗೆ ರೈಲ್ವೇ ಪರಿಶೀಲನೆಯನ್ನು ನಡೆಸಿದೆ’ ಎಂದಿದ್ದಾರೆ.
ಹೊಸ ರೈಲ್ವೇ ವಲಯವನ್ನು ಸ್ಥಾಪನೆ ಮಾಡಬೇಕು ಎಂಬುದು ಆಂಧ್ರ ಪ್ರದೇಶದ ಆಡಳಿತ ಪಕ್ಷ ಟಿಡಿಪಿಯ ದೀರ್ಘ ಅವಧಿಯ ಬೇಡಿಕೆಯಾಗಿದೆ. ಇಲ್ಲಿನ ಬಿಜೆಪಿಯೂ ಈ ಬಗ್ಗೆ ಬೇಡಿಕೆಯನ್ನು ಇಟ್ಟಿತ್ತು. ರಾಜ್ಯದ ಅಭಿವೃದ್ಧಿಗೆ ಇದು ಅತ್ಯಗತ್ಯ ಎಂದು ವಾದಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.