ನವದೆಹಲಿ: ಭಾರತ ಪಾಕಿಸ್ಥಾನಕ್ಕೆ ನೀರು ಪೂರೈಕೆಯಾಗುವುದನ್ನು ನಿಲ್ಲಿಸಿ ಬಿಡಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಎಚ್ಚರಿಕೆ ನೀಡಿದ್ದಾರೆ, ಫೆ.14ರಂದು ಪುಲ್ವಾಮದಲ್ಲಿ ನಡೆದ ದಾಳಿಯ ಹಿನ್ನಲೆಯಲ್ಲಿ ಅವರು ಈ ಎಚ್ಚರಿಕೆಯನ್ನು ನೆರೆಯ ಉಗ್ರ ಬೆಂಬಲಿಗ ರಾಷ್ಟ್ರಕ್ಕೆ ರವಾನಿಸಿದ್ದಾರೆ.
ಉತ್ತರಪ್ರದೇಶ ಭಾಗ್ಪತ್ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ಥಾನಕ್ಕೆ ಪ್ರವೇಶಿಸುವ ಮೂರು ನದಿಗಳ ನೀರನ್ನು ಯಮುನಾ ನದಿಗೆ ತಿರುಗಿಸಿ ಬಿಡಬಹುದಾಗಿದೆ. ಈ ಮೂರು ನದಿಗಳನ್ನು ಜೋಡಿಸಿ ನೀರು ಹರಿಯುವಿಕೆಯನ್ನು ಸುಗಮಗೊಳಿಸುವ ಯೋಜನೆಯತ್ತ ಚಿಂತನೆ ನಡೆಸುತ್ತೇವೆ ಎಂದಿದ್ದಾರೆ.
‘ಮೂರು ನದಿಗಳ ನೀರು ಪಾಕಿಸ್ಥಾನಕ್ಕೆ ಹರಿಯುತ್ತದೆ. ಅಂದರೆ ನಮ್ಮ ಹಕ್ಕಿನ ನೀರು ಅವರಿಗೆ ಹರಿಯುತ್ತಿದೆ. ಈಗ ನಾವು ಯೋಜನೆ ರೂಪಿಸುವ ಚಿಂತನೆ ನಡೆಸುತ್ತಿದ್ದೇವೆ ಮತ್ತು ಈ ಮೂರು ನದಿಗಳ ನೀರನ್ನು ಯಮುನೆಯತ್ತ ತಿರುಗಿಸಲು ಯೋಜಿಸಿದ್ದೇವೆ. ಇದರಿಂದ ಯಮುನಾ ನದಿಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಲಿದೆ’ ಎಂದಿದ್ದಾರೆ.
ಹುತಾತ್ಮರಾದ ಯೋಧರ ಬಲಿದಾನವನ್ನು ಈ ತಾಯ್ನಾಡು ಎಂದಿಗೂ ಮರೆಯಲಾರದು ಎಂದು ಗಡ್ಕರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.