ಪಾಟ್ನಾ: ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬದವರಿಗೆ ದೇಶದ ಜನರಿಂದ ನೆರವಿನ ಹಸ್ತ ಹರಿದು ಬರುತ್ತಿದೆ. ಬಿಹಾರದ ಗೋಪಾಲ್ಗಂಜ್ ಸಬ್ ಡಿವಿಶನಲ್ ಜೈಲಿನ ಕೈದಿಗಳು ಕೂಡ 50 ಸಾವಿರ ರೂಪಾಯಿಗಳನ್ನು ಆರ್ಮಿ ರಿಲೀಫ್ ಫಂಡ್ಗೆ ನೀಡಿದ್ದಾರೆ.
ಈ ಜೈಲಿನಲ್ಲಿ 750 ಕೈದಿಗಳಿದ್ದಾರೆ, ಇದರಲ್ಲಿ 30 ಮಂದಿ ಮಹಿಳಾ ಕೈದಿಗಳು, 102 ಶಿಕ್ಷೆಗೊಳಗಾದ ಕೈದಿಗಳಾಗಿದ್ದಾರೆ. ಉಳಿದವರು ವಿಚಾರಣಾಧೀನ ಕೈದಿಗಳು. ಈ ಎಲ್ಲಾ ಕೈದಿಗಳು ಜೈಲಿನೊಳಗೆ ತಾವು ದುಡಿದು ಸಂಪಾದಿಸಿದ ಹಣವನ್ನು ಒಟ್ಟು ಸೇರಿಸಿ ಪುಲ್ವಾಮದ ದಾಳಿಯಲ್ಲಿ ಹುತಾತ್ಮರಾದವರ ಕುಟುಂಬದವರಿಗಾಗಿ ಆರ್ಮಿ ರಿಲೀಫ್ ಫಂಡ್ಗೆ ಕಳುಹಿಸಿಕೊಟ್ಟಿದ್ದಾರೆ.
ಜೈಲಿನ ಕೈದಿಗಳು ಪುಲ್ವಾಮ ದಾಳಿಯ ಬೆಳವಣಿಗೆಯನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದಾರೆ, ಹುತಾತ್ಮ ಯೋಧರ ಕುಟುಂಬಗಳಿಗೆ ತಮ್ಮಿಂದಾದ ಸಹಾಯವನ್ನು ಮಾಡುವ ಇಂಗಿತದೊಂದಿಗೆ ತಮ್ಮ ಹಣವನ್ನು ಒಟ್ಟು ಸೇರಿಸಿ ನೀಡಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮಾತ್ರವಲ್ಲ, 250 ಕೈದಿಗಳ ಸಹಿಯುಳ್ಳ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿಕೊಡಲಾಗಿದ್ದು, ಇದರಲ್ಲಿ ಒಂದು ವೇಳೆ ಗಡಿಯಲ್ಲಿ ಯುದ್ಧ ಸಂಭವಿಸಿದರೆ ನಮಗೆ ಹೋರಾಡುವ ಅವಕಾಶವನ್ನು ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
‘ಒಂದು ಹೋರಾಡಲು ನಮಗೆ ಅವಕಾಶ ಕೊಟ್ಟರೆ, ಹುತಾತ್ಮರೆಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತೇವೆ. ಒಂದು ವೇಳೆ ಬದುಕುಳಿದರೆ, ಇದೇ ಕಂಬಿಯೊಳಗೆ ಮತ್ತೆ ಆಗಮಿಸುತ್ತೇವೆ, ಆಡಳಿತಕ್ಕೆ ಯಾವುದೇ ತೊಂದರೆಯನ್ನೂ ನೀಡುವುದಿಲ್ಲ’ ಎಂದಿದ್ದಾರೆ.
ಕೈದಿಗಳು ನೀಡಿದ ಹಣ ಕಮ್ಮಿಯಾಗಿರಬಹುದು, ಆದರೆ ಅವರ ಆಶಯ ಅತ್ಯಂತ ದೊಡ್ಡದು ಎಂದು ಜೈಲು ಅಧಿಕಾರಿ ಸಂದೀಪ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.