ನವದೆಹಲಿ: ಮೊಹಾಲಿ ಕ್ರಿಕೆಟ್ ಸ್ಟೇಡಿಯಂನೊಳಗೆ ಹಾಕಲಾಗಿದ್ದ ಕೆಲವು ಪಾಕಿಸ್ಥಾನಿ ಕ್ರಿಕೆಟಿಗರ ಫೋಟೋಗಳನ್ನು ಭಾನುವಾರ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕಿತ್ತು ಹಾಕಿದೆ. ಭಾರತೀಯ ಸೇನೆಯ ಜೊತೆಗಿದ್ದೇವೆ ಎಂಬುದನ್ನು ಸಾಂಕೇತಿಕವಾಗಿ ತೋರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಚಂಡೀಗಢದಲ್ಲಿ ನಡೆದ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ಖಜಾಂಚಿ ಅಜಯ್ ತ್ಯಾಗಿ ಹೇಳಿದ್ದಾರೆ. ’ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳ ಜೊತೆ ನಿಲ್ಲುತ್ತೇವೆ ಎಂದು ಸಾಂಕೇತಿಸಲು ಪಾಕ್ ಆಟಗಾರರ ಫೋಟೋಗಳನ್ನು ಕಿತ್ತು ಹಾಕಲಾಗಿದೆ. ಈ ಹೇಯ ಕೃತ್ಯಕ್ಕೆ ಇಡೀ ದೇಶವೇ ಆಕ್ರೋಶಿತಗೊಂಡಿದೆ ಮತ್ತು ಪಂಜಾಬ್ ಕ್ರಿಕೆಟ್ ಮಂಡಳಿ ಇದಕ್ಕೆ ಹೊರತಾಗಿಲ್ಲ’ ಎಂದಿದ್ದಾರೆ.
ಸುಮಾರು 15 ಪಾಕ್ ಆಟಗಾರರ ಫೋಟೋಗಳನ್ನು ಪಂಜಾಬ್ ಕ್ರಿಕೆಟ್ ಸ್ಟೇಡಿಯಂನೊಳಗಿನ, ಗ್ಯಾಲರಿ, ಲಾಂಗ್ ರೂಮ್, ರಿಸೆಪ್ಷನ್ ಮತ್ತು ‘ಹಾಲ್ ಆಫ್ ಫೇಮ್’ ಏರಿಯಾಗಳಲ್ಲಿ ಇಡಲಾಗಿತ್ತು. ಪಾಕ್ ಪ್ರಧಾನಿ ಇಮ್ರಾನ್ ಖಾನೆ, ಜಾವೇದ್ ಮಿಯಾನಂದ್, ವಾಸೀಂ ಅಕ್ರಂ ಫೋಟೋಗಳನ್ನು ಇದು ಒಳಗೊಂಡಿದೆ. ಇವೆಲ್ಲವನ್ನೂ ಈಗ ತೆಗೆದು ಹಾಕಲಾಗಿದೆ.
ಪಾಕಿಸ್ಥಾನ ಮೂಲದ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಕುಮ್ಮಕ್ಕಿನಿಂದ ಆತ್ಮಾಹುತಿ ಸುಸೈಡ್ ಬಾಂಬರ್ವೊಬ್ಬ ಸ್ಪೋಟಕಗಳನ್ನು ತುಂಬಿದ ಕಾರನ್ನು ಸೈನಿಕರ ಬಸ್ಗೆ ಗುದ್ದಿಸಿದ್ದ ಪರಿಣಾಮ ದೇಶ ಎಂದಿಗೂ ಮರೆಯಲಾಗದ ಕಹಿ ಘಟನೆ ಸಂಭವಿಸಿತು. 40 ಸಿಆರ್ಪಿಎಫ್ ಯೋಧರು ಹುತಾತ್ಮರಾದರು. ಜೈಶೇ ಉಗ್ರರಿಗೆ ಪಾಕ್ ಬೆಂಬಲ ನೀಡಿ, ಅವರನ್ನು ಪೋಷಿಸುತ್ತಿದೆ. ಭಾರತದ ವಿರುದ್ಧದ ಚಟುವಟಿಕೆಗೆ ಅವರನ್ನು ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಇಡೀ ಭಾರತವೇ ಇಂದು ಪಾಕ್ ವಿರುದ್ಧ ತಿರುಗಿ ಬಿದ್ದು ಪ್ರತಿಕಾರ ತೀರಿಸಲು ತುದಿಗಾಲಲ್ಲಿ ನಿಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.