ನವದೆಹಲಿ: ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು, ಶುಕ್ರವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ದೂರವಾಣಿ ಕರೆ ಮಾಡಿ, ಪಾಕಿಸ್ಥಾನ ಉಗ್ರ ಸಂಘಟನೆ ಜೈಶೇ ಮೊಹಮ್ಮದ್ ಪ್ರಾಯೋಜಿತ ಪುಲ್ವಾಮ ದಾಳಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯ ನಿರ್ಣಯದ ಪ್ರಕ್ರಿಯೆಯಡಿಯಲ್ಲಿ ಪಾಕಿಸ್ಥಾನವನ್ನು ಈ ಪ್ರಕರಣದ ಜವಬ್ದಾರನನ್ನಾಗಿಸುವ ಮತ್ತು ಜೈಶೇ ಮೊಹಮ್ಮದ್ ಉಗ್ರ ಮಸೂದ್ ಅಝರ್ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸುವ ಬಗ್ಗೆ ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಪರಸ್ಪರ ಸಮ್ಮತಿ ಸೂಚಿಸಿದ್ದಾರೆ.
‘ಫೆ.15ರಂದು ಜಾನ್ ಬೋಲ್ಟನ್ ಅವರು ಅಜಿತ್ ದೋವಲ್ ಅವರಿಗೆ ಫೋನಾಯಿಸಿದ್ದು. ಪಾಕಿಸ್ಥಾನ ಉಗ್ರ ಸಂಘಟನೆ ಪ್ರಾಯೋಜಿತ ಪುಲ್ವಾಮ ದಾಳಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ ಮತ್ತು ಹುತಾತ್ಮ ಯೋಧರ ಬಗ್ಗೆ ಸಂತಾಪ ಸೂಚಿಸಿದ್ದಾರೆ’ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.
ಗಡಿಯಾಚೆಗಿನ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿನ ಭಾರತದ ಹಕ್ಕಿಗೆ ಬೆಂಬಲ ಸೂಚಿಸುವುದಾಗಿ ಬೋಲ್ಟನ್ ಭರವಸೆ ನೀಡಿದ್ದಾರೆ. ನೀಚ ಕೃತ್ಯದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವಲ್ಲಿಯೂ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
ಜೈಶೇ ಮೊಹಮ್ಮದ್ ಸಂಘಟನೆಗೆ ಸೇರಿದಂತೆ ಇತರ ಉಗ್ರ ಸಂಘನೆಗಳಿಗೆ ಸುರಕ್ಷಿತ ಸ್ವರ್ಗವನ್ನು ಕಲ್ಪಿಸುವ ಪಾಕಿಸ್ಥಾನದ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಭರವಸೆಯನ್ನೂ ಅವರು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.