ಸೂರತ್: ಸೂರತ್ ಉದ್ಯಮಿಯೊಬ್ಬರು, ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಕುಟುಂಬಗಳಿಗೆ ರೂ.11 ಲಕ್ಷಗಳನ್ನು ಮತ್ತು ಸೇನಾ ಪಡೆಗಳಿಗೆ ರೂ.5 ಲಕ್ಷಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ತಮ್ಮ ಮಗಳ ವಿವಾಹ ಸಮಾರಂಭಕ್ಕೆಂದು ಎತ್ತಿಟ್ಟ ಹಣವನ್ನು ಅವರು ಯೋಧರಿಗೆ ನೀಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ದೆವಶಿ ಮಾನೆಕ್ ಸೂರತ್ನ ವಜ್ರದ ವ್ಯಾಪಾರಿಯಾಗಿದ್ದಾರೆ, ತಮ್ಮ ಮಗಳ ವಿವಾಹದ ನಿಮಿತ್ತ ನಡೆಯಬೇಕಾಗಿದ್ದ ಔತಣಕೂಟವನ್ನು ರದ್ದುಗೊಳಿಸಿ ಅದರ ಹಣವನ್ನು ಸೇನೆಗೆ ನೀಡಿದ್ದಾರೆ. ಈ ಮೂಲಕ ಹುತಾತ್ಮ ಯೋಧರ ಕುಟುಂಬಕ್ಕೆ ಸ್ವಲ್ಪ ಆರ್ಥಿಕ ನೆರವು ಸಿಗುವಂತೆ ಮಾಡಿದ್ದಾರೆ.
ಅವರ ಮಗಳು ಅಮಿಯ ಔತಣಕೂಟ ಫೆ.15ರಂದು ವಿವಾಹದ ಬಳಿಕ ನಡೆಯಬೇಕಿತ್ತು, ಆದರೆ ಹುತಾತ್ಮರ ಕುಟುಂಬ ಕಣ್ಣಿರನ್ನು ಒರೆಸುವ ಸಲುವಾಗಿ ಅವರು ಔತಣಕೂಟ ರದ್ದುಪಡಿಸಿ ಹಣವನ್ನು ಕೊಡುಗೆಯಾಗಿ ನೀಡಿದ್ದಾರೆ.
ವೀರ ಯೋಧರ ಬಲಿದಾನದಿಂದ ಇಡೀ ದೇಶವೇ ದುಃಖತಪ್ತವಾಗಿದೆ. ದೇಶದಾದ್ಯಂತ ಪ್ರತಿಭಟನೆ, ಆಕ್ರೋಶಗಳು ಭುಗಿಲೆದ್ದಿದೆ. ಪ್ರತಿಕಾರಕ್ಕಾಗಿ ಪ್ರತಿಯೊಬ್ಬ ಭಾರತೀಯನೂ ಎದ್ದು ನಿಂತಿದ್ದಾನೆ.
ಈ ಘಟನೆಯ ಹಿಂದೆ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿದೆ ಎನ್ನಲಾಗಿದ್ದು, ಅದರ ಸದಸ್ಯ ಆದಿಲ್ ಅಹ್ಮದ್ ಸಿಆರ್ಪಿಎಫ್ ಪ್ರಯಾಣಿಸುತ್ತಿದ್ದ ಬಸ್ಗಳ ಮೇಲೆ ಸ್ಪೋಟಕ ತುಂಬಿದ ವಾಹನವನ್ನು ಗುದ್ದಿಸಿ ದುಷ್ಕೃತ್ಯ ಎಸಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.