ನವದೆಹಲಿ: ಜಮ್ಮು ಕಾಶ್ಮೀರದ ಆವಂತಿಪೋರಾದಲ್ಲಿ 44 ಸಿಆರ್ಪಿಎಫ್ ಯೋಧರ ಹತ್ಯೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವುದಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಸ್ಥರಿಗೆ ಅವರಿಗೆ ಸಾಂತ್ವಾನ ಹೇಳಿದ್ದಾರೆ.
ಭಾರತವನ್ನು ದುರ್ಬಲಗೊಳಿಸುವ ನಿಮ್ಮ ಯೋಜನೆಗಳು ಎಂದಿಗೂ ಕಾರ್ಯಗತಗೊಳ್ಳದು ಎಂದು ಪಾಕಿಸ್ಥಾನಕ್ಕೆ ಕಠಿಣ ಸಂದೇಶವನ್ನು ರವಾನಿಸಿರುವ ಮೋದಿ, ಈ ಘಟನೆಯ ಹಿಂದಿರುವವವರ ವಿರುದ್ಧ ಕಠಿಣ ಕ್ರಮವನ್ನು ಜರಗಿಸುತ್ತೇವೆ, ಅವರು ಇದಕ್ಕಾಗಿ ತಕ್ಕ ಬೆಲೆಯನ್ನು ತೆರಲೇ ಬೇಕು ಎಂದಿದ್ದಾರೆ.
ಭಯೋತ್ಪಾದನೆಯನ್ನು ಹತ್ತಿಕ್ಕಲು ಸೇನಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತೇವೆ ಎಂದ ಅವರು, ಜನರ ರಕ್ತ ಕುದಿಯುತ್ತಿದೆ ಎಂದಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ‘ಇಂತಹ ಕೃತ್ಯಗಳು ನಮ್ಮನ್ನು ದುರ್ಬಲಗೊಳಿಸುತ್ತದೆ ಎಂದು ನೆರೆ ರಾಷ್ಟ್ರ ಭಾವಿಸಿದೆ. ಆದರೆ ಅವರ ಯೋಜನೆ ಕಾರ್ಯಗತಗೊಳ್ಳಲಾರದು. ನಮ್ಮ ವೀರ ಯೋಧರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಅವರೊಗೆ ಭಯೋತ್ಪಾದಕರನ್ನು ಹತ್ತಿಕ್ಕಲು ಬೇಕಾದ ಎಲ್ಲಾ ಸ್ವಾತಂತ್ರ್ಯವನ್ನು ನೀಡುತ್ತೇವೆ’ ಎಂದಿದ್ದಾರೆ.
‘ವೀರ ಯೋಧರು ಪ್ರಾಣ ತೆತ್ತ ವೇಳೆ ಕಂಡ ಎರಡು ಕನಸನ್ನು ನನಸಾಗಿಸಲು ನಾನು ನನ್ನ ಜೀವನವನ್ನು ಸವೆಸುತ್ತೇನೆ. ಆ ಎರಡು ಕನಸುಗಳು ಭದ್ರತೆ ಮತ್ತು ಸುರಕ್ಷತೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.