ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಮೂಲಕ ಭಾರತ ಬಯಲು ಶೌಚಮುಕ್ತಗೊಳ್ಳುವತ್ತ ದಾಪುಗಾಲಿಡುತ್ತಿದೆ. ಈ ಅಭಿಯಾನದಿಂದಾಗಿ ದೇಶದಲ್ಲಿ ನೈರ್ಮಲ್ಯದ ಬಗೆಗಿನ ಜಾಗೃತಿ ಬಲಗೊಳ್ಳುತ್ತಿದೆ. ಭಾರತದ ಈ ಯಶಸ್ವಿ ಅಭಿಯಾನ ನೈಜೀರಿಯಾದ ಗಮನವನ್ನೂ ಸೆಳೆದಿದ್ದು, ತನ್ನ ದೇಶದಲ್ಲೂ ಇಂತಹ ಒಂದು ಅಭಿಯಾನವನ್ನು ಆರಂಭಿಸುವ ಬಗ್ಗೆ ಅದು ಚಿಂತನೆ ನಡೆಸುತ್ತಿದೆ. ಅದಕ್ಕಾಗಿ ’ಸ್ವಚ್ಛ ಭಾರತ’ದ ಬಗ್ಗೆ ಅದು ಅಧ್ಯಯನ ನಡೆಸಲು ಮುಂದಾಗಿದೆ.
ನೈಜೀರಿಯಾದ ಜಲ ಸಂಪನ್ಮೂಲ ಸಚಿವ ಸುಲೇಮಾನ್ ಎಚ್ ಅದಮು ಅವರು, ಸ್ವಚ್ಛ ಭಾರತದ ಮಾದರಿಯಲ್ಲೇ ನೈಜೀರಿಯಾ ತನ್ನ ಬಯಲು ಶೌಚಮುಕ್ತ ಆಂದೋಲನವನ್ನು ರೂಪಿಸಲು ನಿರ್ಧರಿಸಿದೆ ಎಂದಿದ್ದಾರೆ. ಭಾರತ ಈ ಅಭಿಯಾನ ನೈಜೀರಿಯಾವನ್ನೂ ಪ್ರೇರೇಪಿಸಿದೆ ಎಂದಿದ್ದಾರೆ.
ಇತ್ತೀಚಿಗೆ ನಡೆದ ಮಹಾತ್ಮ ಗಾಂಧಿ ಇಂಟರ್ನ್ಯಾಷನಲ್ ಸ್ಯಾನಿಟೇಶನ್ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿ ಮಾತನಾಡಿದ್ದ ಅವರು, ‘ಈ ಕಾನ್ಫರೆನ್ಸ್ ಭಾಗಿಯಾಗಿ ಪ್ರೇರಿತನಾಗಿದ್ದೇನೆ, ಸ್ವಚ್ಛ ಭಾರತ ಅಭಿಯಾನ ಮತ್ತು ಅದು ಹೇಗೆ ಭಾರತವನ್ನು ಪರಿವರ್ತಿಸುತ್ತಿದೆ ಎಂಬುದರ ಬಗ್ಗೆ ನೈಜ ಅನುಭವ ಪಡೆಯಲು ನನಗೆ ಸಾಧ್ಯವಾಗಿದೆ’ ಎಂದಿದ್ದಾರೆ.
ಸ್ವಚ್ಛ ಭಾರತ ಅಭಿಯಾನ ಜಾಗತಿಕ ಗಮನವನ್ನು ಸೆಳೆದಿದ್ದು ಇದೇ ಮೊದಲಲ್ಲ, ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯೂ ಈ ಅಭಿಯಾನವನ್ನು ಶ್ಲಾಘಿಸಿದ್ದು, 3 ಲಕ್ಷ ಮಂದಿಯನ್ನು ಸಾವಿನಿಂದ ಕಾಪಾಡಿದೆ ಎಂದಿತ್ತು.
ರುಕಿ ಬಾಂಡ್ ಎಂಬ ಖ್ಯಾತ ಬರಹಗಾರರೊಬ್ಬರೂ, ಈ ಯೋಜನೆಯನ್ನು ಶ್ಲಾಘಿಸಿದ್ದು, ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚು ಸ್ವಚ್ಛ ಮಾಡಿದೆ. ಆದರೆ ಕೆಲವೊಂದು ಹಳೇ ಅಭ್ಯಾಸಗಳು ಇನ್ನೂ ಸವಾಲುಗಳಾಗಿ ಪರಿಣಮಿಸಿದೆ ಎಂದಿದ್ದಾರೆ.
ನೈಜೀರಿಯಾ ಸ್ವಚ್ಛ ಭಾರತ ಮಾದರಿಯನ್ನು ತನ್ನ ದೇಶದಲ್ಲೂ ಅಳವಡಿಸಿಕೊಳ್ಳಲು ಮುಂದಾಗಿರುವುದು ಮಹತ್ವದ ಸಾಧನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.