ನವದೆಹಲಿ: ಭಾರತ ಮತ್ತು ನೇಪಾಳ ಕೇವಲ ಭೌಗೋಳಿಕವಾಗಿ ಮಾತ್ರ ಸನಿಹದಲ್ಲಿಲ್ಲ, ಬದಲಾಗಿ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿಯೂ ಸನಿಹದಲ್ಲಿವೆ. ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧಗಳು ಬಲಿಷ್ಠವಾಗಿ ಸಾಗಿದ್ದು, ಭವಿಷ್ಯದಲ್ಲೂ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವ ನಿರೀಕ್ಷೆ ಇದೆ.
ನೇಪಾಳದ ಹಣಕಾಸು ಸಚಿವಾಲಯದ ಸುಮಾರು 20 ಮಂದಿ ಅಧಿಕಾರಿಗಳು ಭಾರತದಲ್ಲಿ ತಮ್ಮ ಎರಡನೇ ಹಂತದ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇ-ಪೇಮೆಂಟ್ ವ್ಯವಸ್ಥೆಯ ಕೌಶಲ್ಯ ವೃದ್ಧಿ, ಅಕೌಂಟಿಂಗ್, ಇಂಟರ್ನಲ್ ಆಡಿಟ್, ಹಣಕಾಸು ಜವಾಬ್ದಾರಿ ಇತ್ಯಾದಿಗಳ ಬಗ್ಗೆ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ನವದೆಹಲಿ ಮೂಲದ ಇನ್ಸ್ಟಿಟ್ಯೂಟ್ ಆಫ್ ಗವರ್ನ್ಮೆಂಟ್ ಅಕೌಂಟ್ಸ್ ಆಂಡ್ ಫೈನಾನ್ಸ್ನಲ್ಲಿ ಇವರಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ.
ನೇಪಾಳದ ಹಣಕಾಸು ಸಚಿವಾಲಯದ ಮನವಿ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಭಾರತ ತರಬೇತಿಯನ್ನು ನೀಡುತ್ತಿದೆ. ಪಬ್ಲಿಕ್ ಫೈನಾನ್ಶಿಯಲ್ ಮ್ಯಾನೇಜ್ಮೆಂಟ್ ಕೋರ್ಸ್ನ ಜಾಗತಿಕ ಆಯಾಮಕ್ಕೆ ಬೇಕಾದಂತೆ ತರಬೇತಿಯನ್ನು ಒದಗಿಸಲಾಗುತ್ತಿದೆ.
ಜನವರಿ 14ರಿಂದ ತರಬೇತಿ ಕಾರ್ಯಕ್ರಮ ಆರಂಭಗೊಂಡಿದ್ದು, ಒಟ್ಟು ಮೂರು ಬ್ಯಾಚ್ಗಳಲ್ಲಿ ನೇಪಾಳದ 62 ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಒಂದೊಂದು ಬ್ಯಾಚ್ನಲ್ಲಿ ತಲಾ 20 ಅಧಿಕಾರಿಗಳು ಇರಲಿದ್ದಾರೆ.
ಈಗಾಗಲೇ ಜ.24ರ ವರೆಗೆ ಮೊದಲ ಬ್ಯಾಚ್ ಯಶಸ್ವಿಯಾಗಿ ತರಬೇತಿಯನ್ನು ಪಡೆದುಕೊಂಡಿದೆ. ವಿದೇಶಾಂಗ ಸಚಿವಾಲಯದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದಡಿ ತರಬೇತಿಯನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.