ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಳೆತ್ತರ ಭಾವಚಿತ್ರವನ್ನು ಮಂಗಳವಾರ ಬೆಳಿಗ್ಗೆ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಅನಾವರಣಗೊಳಿಸಲಾಗಿದೆ. ಉತ್ತರಪ್ರದೇಶದ ವೃಂದಾವನದ ಖ್ಯಾತ ಕಲಾವಿದ ಕೃಷ್ಣ್ ಕನ್ಹಯ್ಯ ಅವರು ಈ ಭಾವಚಿತ್ರವನ್ನು ರಚನೆ ಮಾಡಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದನ್ನು ಅನಾವರಣಗೊಳಿಸಿದರು.
ಭಾವಚಿತ್ರ ಅನಾವರಣದ ವೇಳೆ ಕೇಂದ್ರ ಸಚಿವರುಗಳು ಮತ್ತು ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಅಟಲ್ ಜೀ ಅವರು ಸುದೀರ್ಘ ರಾಜಕೀಯ ಜೀವನವನ್ನು ಹೊಂದಿದ್ದರು, ಬಹುತೇಕ ಅವಧಿಯನ್ನು ವಿರೋಧ ಪಕ್ಷದಲ್ಲಿದ್ದೇ ಕಳೆದರು. ಆದರೂ, ಅವರು ಸಾರ್ವಜನಿಕ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದರು ಮತ್ತು ತನ್ನ ಸಿದ್ಧಾಂತದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ’ ಎಂದರು.
ವಾಜಪೇಯಿ ಭಾವಚಿತ್ರವನ್ನು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಹಾಕುವ ನಿರ್ಧಾರವನ್ನು ಡಿ.18ರಂದು ನಡೆದ ಸಂಸತ್ತು ಭಾವಚಿತ್ರ ಸಮಿತಿ ಸಭೆಯಲ್ಲಿ ಅವಿರೋಧವಾಗಿ ತೆಗೆದುಕೊಳ್ಳಲಾಯಿತು. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಇದರ ನೇತೃತ್ವವನ್ನು ವಹಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಯೆಡಿಎಂಕೆ ನಾಯಕ ತಂಬಿ ದುರೈ, ಬಿಜೆಡಿಯ ಬ್ರಾರ್ತುಹರಿ ಮಹತಬ್, ಟಿಎಂಸಿಯ ಸುದೀಪ್ ಬಂದೋಪಧ್ಯಾಯ, ಟಿಆರ್ಎಸ್ನ ಜಿತೇಂದ್ರ ರೆಡ್ಡು, ಶಿವಸನೆಯ ಅನಂತ್ ಗೀತೆ, ಬಿಜೆಪಿಯ ಸತ್ಯನಾರಾಯಣ ಜಾತಿಯ ಸಭೆಯಲ್ಲಿ ಭಾಗಿಯಾಗಿದ್ದರು.
ಅಜಾತಶತ್ರು ಎಂದೇ ರಾಜಕೀಯ ವಲಯದಲ್ಲಿ ಹೆಸರುವಾಸಿಯಾಗಿದ್ದ ಅಟಲ್ ಅವರು, 1996ರಲ್ಲಿ 13 ದಿನಗಳ ಕಾಲ, 1998ರಿಂದ 1999ರವರೆಗೆ 13 ತಿಂಗಳುಗಳ ಕಾಲ ಮತ್ತು 1999ರಿಂದ 2004ರವರೆಗೆ 5 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದರು.
2018ರ ಆಗಸ್ಟ್ 16ರಂದು 93ನೇ ವಯಸ್ಸಿನಲ್ಲಿ ಅವರು ಇಹಲೋಕವನ್ನು ತ್ಯಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.