ಪ್ರಯಾಗ್ರಾಜ್: ಅಯೋಧ್ಯಾದಲ್ಲಿ ಫೆಬ್ರವರಿ 21ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದೇವೆ ಎಂದು ಶಂಕರಾಚಾರ್ಯ ಸ್ವರೂಪಾನಂದ ಸ್ವರಸ್ವತಿ ಸೋಮವಾರ ಹೇಳಿದ್ದಾರೆ.
‘ಫೆಬ್ರವರಿ 17ರಂದು ನಾವು ಪ್ರಯಾಗ್ರಾಜ್ನಿಂದ ಅಯೋಧ್ಯಾಗೆ ತೆರಳಲಿದ್ದೇವೆ ಮತ್ತು ಫೆ.21ರಂದು ರಾಮಮಂದಿರಕ್ಕೆ ಶಿಲಾನ್ಯಾಸವನ್ನು ನೆರವೇರಿಸುತ್ತೇವೆ’ ಎಂದು ಸುದ್ದಿ ಮಾಧ್ಯಮಗಳಿಗೆ ಸ್ವರೂಪಾನಂದ ತಿಳಿಸಿದ್ದಾರೆ.
ಇತ್ತೀಚಿಗೂ ಅವರು ಇದೇ ಹೇಳಿಕೆಯನ್ನು ನೀಡಿದ್ದರು, ಇದೀಗ ಫೆ.21ರಂದು ಶಿಲಾನ್ಯಾಸ ನೆರವೇರಿಸುವುದಾಗಿ ಪುನರುಚ್ಚರಿಸಿದ್ದಾರೆ. ಯಾವ ದಾಳಿ, ಬಂಧನಗಳಿಗೂ ಜಗ್ಗುದಿಲ್ಲ ಎಂದು ಅವರು ಹೇಳಿದ್ದರು.
ಫೆ.6ರಂದು ಸಂತರ ಸಂಘಟನೆ, ಫೆ.21ರಂದು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಡಲು ತೀರ್ಮಾನಿಸಿತು. ಎಂತಹ ಸಂದರ್ಭ ಎದುರಾದರೂ ಹಿಂಜರಿಯಬಾರದು ಎಂಬ ನಿರ್ಧಾರವನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ.
ಮೊನ್ನೆಯಷ್ಟೇ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣದ ವಿವಾದ 24 ಗಂಟೆಗಳಲ್ಲಿ ಇತ್ಯರ್ಥವಾಗಬೇಕು ಎಂದಿದ್ದರು.
‘ಅಯೋಧ್ಯಾ ಭಾರತ ಮತ್ತು ವಿದೇಶಗಳಿಗೆ ಶ್ರೀರಾಮನಿಂದಾಗಿ ಚಿರಪರಿಚಿತವಾಗಿದೆಯೇ ಹೊರತು ವಿದೇಶಿ ದಾಳಿಕೋರ ಬಾಬರ್ನಿಂದಾಗಿ ಅಲ್ಲ. ಜನರ ನಂಬಿಕೆಗಳಿಗೆ ಗೌರವ ನೀಡಬೇಕು. ನ್ಯಾಯಾಲಯ ಜನರ ನಂಬಿಕೆಗಳನ್ನು ಗೌರವಿಸಬೇಕು ಎಂದು ನಾನು ಹೇಳುತ್ತಲೇ ಬಂದಿದ್ದೇನೆ’ ಎಂದು ಇತ್ತೀಚಿಗಷ್ಟೇ ಯುಪಿ ಸಿಎಂ ಆದಿತ್ಯನಾಥ ಅಸೆಂಬ್ಲಿಯಲ್ಲಿ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.