ವೃಂದಾವನ: ಪ್ರಧಾನಿ ನರೇಂದ್ರ ಮೋದಿಯವರು ಇಂದು ವೃಂದಾವನದ ಚಂದ್ರೋಪಾಧ್ಯಾಯ ಕ್ಯಾಂಪಸ್ನಲ್ಲಿ ಅಕ್ಷಯ ಪಾತ್ರದ ’3ನೇ ಶತಕೋಟಿ ಊಟ’ವನ್ನು ಶಾಲಾ ವಿದ್ಯಾರ್ಥಿನಿಗೆ ಬಡಿಸಿದರು. ಸುಮಾರು 20 ಮಂದಿ ಮಕ್ಕಳಿಗೆ ಅವರು ಸ್ವತಃ ನಿಂತು ಊಟವನ್ನು ಬಡಿಸಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಪೂರೈಸುತ್ತಾ ಬಂದಿರುವ ಇಸ್ಕಾನ್ ನೇತೃತ್ವದ ಅಕ್ಷಯಪಾತ್ರ ಫೌಂಡೇಶನ್, ಇಂದು 3 ಶತಕೋಟಿ ಮಕ್ಕಳಿಗೆ ಅನ್ನ ನೀಡಿದ ಮಹತ್ವದ ಹೆಜ್ಜೆ ಗುರುತನ್ನು ಆಚರಿಸುತ್ತಿದೆ.
ಅಕ್ಷಯ ಪಾತ್ರ ಬೆಂಗಳೂರು ಮೂಲದ ಎನ್ಜಿಓ ಆಗಿದ್ದು, ಸರ್ಕಾರದ ಬಿಸಿಯೂಟ ಯೋಜನೆಯೊಂದಿಗೆ ಕೈಜೋಡಿಸಿ ಮಕ್ಕಳಿಗೆ ಆಹಾರ ವಿತರಣೆ ಮಾಡುತ್ತದೆ. ವೃಂದಾವನದಲ್ಲಿ ಅತ್ಯಾಧುನಿಕ ಕಿಚನ್ ವ್ಯವಸ್ಥೆಯನ್ನು ಇದು ಹೊಂದಿದ್ದು, ಇಲ್ಲೇ ಪ್ರಧಾನಿ ಮಕ್ಕಳಿಗೆ ಊಟ ವಿತರಿಸಿದ್ದಾರೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಮಥುರಾ ಸಂಸದೆ ಹೇಮಮಾಲಿನಿ ಈ ವೇಳೆ ಉಪಸ್ಥಿತರಿದ್ದರು.
ಇಸ್ಕಾನ್ನ ಆಚಾರ್ಯ ಶ್ರೀಲ ಪ್ರಭುಪಾದ ಅವರ ವಿಗ್ರಹಕ್ಕೆ ಪುಷ್ಪ ನಮನವನ್ನೂ ಮೋದಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಮೋದಿ, ‘ಉತ್ತಮ ಪೌಷ್ಠಿಕಾಂಶವುಳ್ಳ ಮಕ್ಕಳು ದೇಶ ಆಸ್ತಿ ಎಂದು ಬಣ್ಣಿಸಿದರು. ನಮ್ಮ ಸರ್ಕಾರ ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಲು ಬದ್ಧವಾಗಿದೆ ಎಂದರು.
300ನೇ ಕೋಟಿ ಮಗುವಿಗೆ ಊಟವನ್ನು ಬಡಿಸಿದ್ದು ನನ್ನ ಸೌಭಾಗ್ಯ ಎಂದು ಹೇಳಿದ ಅವರು, ಅಕ್ಷಯಪಾತ್ರದ ಮೊದಲ ಊಟವನ್ನು ಅಟಲ್ ಬಿಹಾರಿ ವಾಜಪೇಯಿ ಅವರ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು ಎಂಬುದನ್ನು ಸ್ಮರಿಸಿದರು.
Had the honour of serving food to children in Vrindavan today. pic.twitter.com/Fs7esScQZA
— Narendra Modi (@narendramodi) February 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.