ನವದೆಹಲಿ: ಭಾರತೀಯ ರೈಲ್ವೇಯು, ತನ್ನ ಹಲವಾರು ರೈಲುಗಳಲ್ಲಿ ಅತ್ಯದ್ಭುತ ಮಧುಬನಿ ಕಲೆಯನ್ನು ಮೂಡಿಸಿದ್ದು, ಈ ಬಣ್ಣ ಬಣ್ಣದ ಚಿತ್ತಾರಗಳಿಂದ ರೈಲುಗಳು ಮನಮೋಹಕವಾಗಿ ಕಂಗೊಳಿಸುತ್ತಿವೆ. ಇದರಿಂದ ಸ್ಪೂರ್ತಿಗೊಂಡಿರುವ ಜಪಾನ್ ತನ್ನ ದೇಶದ ರೈಲುಗಳಲ್ಲೂ ಈ ಕಲೆಯನ್ನು ಮೂಡಿಸಲು ನಿರ್ಧರಿಸಿದೆ.
ಮೂಲಗಳು ಪ್ರಕಾರ, ಜಪಾನ್ ಆಡಳಿತವು ತನ್ನ ದೇಶಕ್ಕೆ ಮಿಥಿಲಾ ಕಲಾವಿದರ ತಂಡವನ್ನು ಕಳುಹಿಸಿಕೊಡುವಂತೆ ಭಾರತೀಯ ರೈಲ್ವೇ ಸಚಿವಾಲಯಕ್ಕೆ ಮನವಿಯನ್ನು ಮಾಡಿಕೊಂಡಿದೆ. ಭಾರತೀಯ ಕಲಾವಿದರಿಂದಲೇ ತನ್ನ ರೈಲುಗಳನ್ನು ಮಧುಬನಿ ಕಲೆಯ ಮೂಲಕ ಅಲಂಕರಿಸುವ ಮಹದಾಸೆಯನ್ನು ಅದು ವ್ಯಕ್ತಪಡಿಸಿದೆ.
ಸ್ಥಳಿಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ, ಬಿಹಾರ ಮೂಲದ ರಾಜಧಾನಿ ಎಕ್ಸ್ಪ್ರೆಸ್, ಸಂಪರ್ಕ್ ಕ್ರಾಂತಿ ಎಕ್ಸ್ಪ್ರೆಸ್ಗಳನ್ನು ಭಾರತೀಯ ರೈಲ್ವೇಯು ಮಧುಬನಿ ಚಿತ್ರಗಳಿಂದ ಅಲಂಕರಿಸಿತ್ತು. ಪಾಟ್ನಾ ರಾಜಧಾನಿಯ 22 ಕೋಚ್ಗಳಲ್ಲಿ ಮೊದಲ ಬಾರಿಗೆ ಈ ಚಿತ್ತಾರ ಮೂಡಿ ಬಂದಿತ್ತು. ಮಾತ್ರವಲ್ಲ, ಅಲ್ಲಲ್ಲಿ ರೈಲ್ವೇ ಸ್ಟೇಶನ್ಗಳನ್ನೂ ಮಧುಬನಿ ಚಿತ್ತಾರಗಳಿಂದ ಅಲಂಕರಿಸಲಾಗಿದೆ. ಇದು ದೇಶದ ಗಮನವನ್ನೇ ಸೆಳೆದಿತ್ತು.
ಭಾರತ ಮತ್ತು ಜಪಾನ್ಗಳು ವಿಶ್ವದ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರಗಳು, ರಾಜಕೀಯ, ಆರ್ಥಿಕ ಸಂಬಂಧದಾಚೆಗೂ ಇವುಗಳು ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಬಾಂಧವ್ಯಗಳನ್ನು ಗಟ್ಟಿಯಾಗಿ ಹೊಂದಿವೆ.
ಜಪಾನ್ನಲ್ಲಿ ಅನೇಕ ಪುಸ್ತಕಗಳು ಹಿಂದೂ ದೇವತೆಗಳ ಆರಾಧನೆಯ ಬಗ್ಗೆ ಬರೆಯಲ್ಪಟ್ಟಿವೆ ಮತ್ತು ಇಂದಿಗೂ ಸಹ, ಜಪಾನ್ ಹಿಂದೂ ದೇವರುಗಳ ಬಗೆಗಿನ ಆಳವಾದ ಅಧ್ಯಯನವನ್ನು ಪ್ರೋತ್ಸಾಹಿಸುತ್ತದೆ. ವಾಸ್ತವವಾಗಿ, ಟೊಕಿಯೊ ಬಳಿ ಕಿಚಿಯೋಜಿ ಎಂಬ ಪಟ್ಟಣವನ್ನು ದೇವತೆ ಲಕ್ಷ್ಮಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕಿಷಿಯಾಜಿ ಎಂದರೆ ಜಪಾನೀ ಭಾಷೆಯಲ್ಲಿ ಲಕ್ಷ್ಮಿ ದೇವಸ್ಥಾನ ಎಂದರ್ಥ. ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಸಾಮ್ಯತೆಗಳು ಇತಿಹಾಸದುದ್ದಕ್ಕೂ ಸ್ಪಷ್ಟವಾಗಿ ಕಾಣಿಸಿಕೊಂಡಿವೆ. ಹಲವು ಜಪಾನಿಯರ ಸಂಸ್ಕೃತಿಯ ಮೇಲೆ ಭಾರತೀಯ ಭಾಷೆಗಳು ಪ್ರಭಾವ ಬೀರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.