ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ನ 51ನೇ ಸಂಚಿಕೆ ಭಾನುವಾರ ಪ್ರಸಾರಗೊಂಡಿದ್ದು, 2019ರ ಹೊಸ ವರ್ಷಕ್ಕೆ ದೇಶದ ಜನತೆಗೆ ಶುಭಕೋರಿದರು. ಅಲ್ಲದೇ ಏಷ್ಯನ್ ಗೇಮ್ಸ್ ಮತ್ತು ಅಂಧ ಕ್ರಿಕೆಟ್ ವಿಶ್ವಕಪ್ನಲ್ಲಿ ಸಾಧನೆ ಮಾಡಿದ ಕ್ರೀಡಾಪಡುಗಳನ್ನು ಶ್ಲಾಘಿಸಿದರು.
2018ರಲ್ಲಿ ದೇಶದ ಅತ್ಯಂತ ಮಹತ್ವದ ಆರೋಗ್ಯ ಯೋಜನೆ ‘ಆಯುಷ್ಮಾನ್ ಭಾರತ್’ ಚಾಲನೆಗೊಂಡಿತು, ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಸಿಕ್ಕಿತು, ಭಾರತ ತನ್ನ ನಾಗರಿಕರನ್ನು ಬಡತನದಿಂದ ಹೊರಕ್ಕೆ ತರುತ್ತಿದೆ ಎಂದು ವಿಶ್ವದ ಏಜೆನ್ಸಿಗಳು ಮನ್ನಣೆ ನೀಡಿದಂತಹ ಮಹತ್ವದ ಕಾರ್ಯಗಳು ಜರಗಿದವು ಎಂದು ಮೋದಿ ಹೇಳಿದ್ದಾರೆ.
ಸೈಕಲ್ ಮೂಲಕ ವಿಶ್ವ ಪರ್ಯಟನೆ ನಡೆಸಿ ಏಷ್ಯಾದ ಅತೀ ವೇಗದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ 20 ವರ್ಷದ ವೇದಾಂಗಿ ಕುಲಕರ್ಣಿಯವರ ಸಾಧನೆಯನ್ನು ಮೋದಿ ಕೊಂಡಾಡಿದರು. 159 ದಿನಗಳ ಕಾಲ ದಿನಕ್ಕೆ 300 ಕಿಮೀಯಂತೆ ಇವರು ಸೈಕಲ್ ಸಂಚಾರ ನಡೆಸಿದ್ದಾರೆ.
ಜನವರಿ 15ರಿಂದ ಪ್ರಯಾಗ್ರಾಜ್ನಲ್ಲಿ ಕುಂಭಮೇಳ ಜರಗುತ್ತಿದೆ. ಇದು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂಬುದಾಗಿ ಯುನೆಸ್ಕೋ ಘೋಷಿಸಿದೆ ಎಂದರು.
ಇದಲ್ಲದೇ ಅನೇಕ ಕ್ರೀಡಾಪಟುಗಳನ್ನು ಉಲ್ಲೇಖಿಸಿ ಶ್ಲಾಘಿಸಿದರು, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆ ತಿಳಿಸಿದರು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.