ಅಲಿಘಢ: ಉತ್ತರಾಖಂಡದ ಕೇದಾರನಾಥದಲ್ಲಿ 2013ರಲ್ಲಿ ಜರುಗಿದ್ದ ಭೀಕರ ಪ್ರವಾಹದ ಸಂದರ್ಭ ನಾಪತ್ತೆಯಾಗಿದ್ದ 17 ವರ್ಷದ ವಿಶೇಷ ಚೇತನ ಬಾಲಕಿಯೊಬ್ಬಳು ಇದೀಗ ಅಲಿಘಢದಲ್ಲಿ ತನ್ನ ಕುಟುಂಬದವರನ್ನು ಸೇರಿದ್ದಾಳೆ.
ಪವಾಡ ಎಂದೇ ಕರೆಯಲಾಗಬಹುದಾದ ಘಟನೆ ಇದಾಗಿದ್ದು, ಬಾಲಕಿ ಚಂಚಲ್ ತನ್ನ ಪೋಷಕರೊಂದಿಗೆ ಯಾತ್ರೆಗೆ ತೆರಳಿದ್ದ ಸಂದರ್ಭ ಭೀಕರ ಪ್ರವಾಹ ತಲೆದೋರಿತ್ತು. ಈ ಪ್ರವಾಹದಲ್ಲಿ ಆಕೆಯ ತಂದೆ ಕೊಚ್ಚಿ ಹೋಗಿದ್ದರು, ತಾಯಿ ಕೆಲದಿನಗಳ ಬಳಿಕ ಮನೆ ವಾಪಾಸ್ಸಾಗಿದ್ದರು. ಘಟನೆ ನಡೆದ ಸಂದರ್ಭ ಈಕೆಯ ವಯಸ್ಸು 12 ಆಗಿತ್ತು, ಇದೀಗ ಈಕೆ 17 ವರ್ಷದವಳಾಗಿದ್ದಾಳೆ.
ಘಟನೆಯಲ್ಲಿ ಚಂಚಲ್ ಕೂಡ ಕೊಚ್ಚಿ ಹೋಗಿದ್ದಾಳೆ ಎಂದು ನಂಬಲಾಗಿತ್ತು. ಆದರೆ ಪ್ರವಾಹದಲ್ಲಿ ಸಿಕ್ಕಿದ ಆಕೆಯನ್ನು ಕಾಪಾಡಿ ಎನ್ಜಿಓ ನಡೆಸುತ್ತಿದ್ದ ಜಮ್ಮುವಿನ ಅನಾಥಾಶ್ರಮಕ್ಕೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ಆಕೆ ಕೆಲ ತಿಂಗಳುಗಳಿಂದ ತನ್ನ ತೊದಲು ಭಾಷೆ ಬಳಸಿ ತನ್ನ ಊರು ಅಲಿಘಢದ ಬಗ್ಗೆ ಏನೋ ಹೇಳಲು ಬಯಸುತ್ತಿದ್ದಾಳೆ ಎಂದು ಎನ್ಜಿಓ ಸದಸ್ಯರಗಳ ಗಮನಕ್ಕೆ ಬಂದಿತ್ತು. ಹೀಗಾಗಿ ಚೈಲ್ಡ್ಲೈನ್ನನ್ನು ಸಂಪರ್ಕಿಸಿ ಅದರ ಮೂಲಕ ಈಕೆಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಈಕೆಯ ಕುಟುಂಬಿಕರನ್ನು ಹುಡುಕಿದ್ದಾರೆ. ಇವರ ಕಾರ್ಯ ಫಲಪ್ರದವಾಗಿದ್ದು, ಚಂಚಲ್ ಇಂದು ಅವಳ ಮನೆ ಸೇರಿದ್ದಾಳೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.