ಜೈಪುರ: ವಿಶ್ವದ ಅತೀ ಎತ್ತರದ ಪ್ರತಿಮೆ ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರ ’ಏಕತಾ ಪ್ರತಿಮೆ’ಯ ಬಳಿಕ ಇದೀಗ ಭಾರತದಲ್ಲಿ ವಿಶ್ವದ ಅತೀ ಎತ್ತರ ಶಿವನ ಪ್ರತಿಮೆ ನಿರ್ಮಾಣವಾಗುತ್ತಿದೆ.
351 ಅಡಿ ಎತ್ತರದ ಶಿವನ ಮೂರ್ತಿ ರಾಜಸ್ಥಾನದ ನಾಥ್ದ್ವಾರದಲ್ಲಿ ನಿರ್ಮಾಣವಾಗುತ್ತಿದ್ದು, 2019ರ ವೇಳೆಗೆ ಇದರ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಈಗಾಗಲೇ ಈ ಪ್ರತಿಮೆಯ ಶೇ.85ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2019ರ ಮಾರ್ಚ್ನಲ್ಲಿ ಇದನ್ನು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಧಯ್ಪುರದಿಂದ 50 ಕಿಮೀ ದೂರದಲ್ಲಿರುವ ನಾಥ್ದ್ವಾರದ ಗಣೇಶ್ ತೆಕ್ರಿಯಲ್ಲಿ ಇದರ ನಿರ್ಮಾಣವಾಗುತ್ತಿದೆ. ಲೋಕಾರ್ಪಣೆಯ ಬಳಿಕ ಇದು ವಿಶ್ವದ ನಾಲ್ಕನೇ ಅತೀ ಎತ್ತರದ ಪ್ರತಿಮೆ ಎನಿಸಿಕೊಳ್ಳಲಿದೆ.
ಏಕತಾ ಪ್ರತಿಮೆ, ಸ್ಪ್ರಿಂಗ್ ಟೆಂಪಲ್ ಬುದ್ಧ, ಲೇಕಿನ್ ಸೆಟ್ಯಾರ್ ಬಳಿಕ ಶಿವನ ಮೂರ್ತಿ ಜಗತ್ತಿನ ಎತ್ತರದ ಮೂರ್ತಿಯಾಗಿ ಹೊರಹೊಮ್ಮಲಿದೆ.
ಕಾಂಕ್ರೀಟ್ ಮತ್ತು ಸಿಮೆಂಟ್ನಿಂದ ಇದನ್ನು ನಿರ್ಮಿಸಲಾಗಿದ್ದು, ಮೀರಜ್ ಗ್ರೂಪ್ ನಿರ್ಮಾಣ ಮಾಡುತ್ತಿದೆ. 750 ಕಾರ್ಮಿಕರು ನಾಲ್ಕು ವರ್ಷದಿಂದ ಇದಕ್ಕಾಗಿ ದುಡಿಯುತ್ತಿದ್ದಾರೆ. 2012ರ ಆಗಸ್ಟ್ನಲ್ಲಿ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಇದಕ್ಕೆ ಶಿಲಾನ್ಯಾಸ ಕಾರ್ಯ ನಡೆಸಿದ್ದರು.
source: timesnownews.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.