ಬಾಗಲಕೋಟೆ: ರೈತನೊಬ್ಬನ ಸಮಯಪ್ರಜ್ಞೆ ಮತ್ತು ಧೈರ್ಯದ ಫಲವಾಗಿ ಗ್ರಾಮದಲ್ಲಿ ನಡೆಯಬೇಕಾಗಿದ್ದ ದೊಡ್ಡ ದುರಂತವೊಂದು ತಪ್ಪಿ ಹೋಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನೆಲಗಡಲೆ ಬೆಳೆಯುವ ರೈತ 28 ವರ್ಷದ ಯಂಕಪ್ಪ ತನ್ನ ಒಣಹುಲ್ಲು ತುಂಬಿದ್ದ ಟ್ರ್ಯಾಕ್ಟರ್ನಲ್ಲಿ ಸಂಚರಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶವಾಗಿ ಬೆಂಕಿ ಕಾಣಿಸಿಕೊಂಡು ಇಡೀ ಟ್ರ್ಯಾಕ್ಟರ್ ಧಗ ಧಗ ಹೊತ್ತಿ ಉರಿದಿತ್ತು. ತುಸುವೇ ಸಮಯವಾದರೂ ಟ್ರ್ಯಾಕ್ಟರ್ನ ಬೆಂಕಿ ಇಡೀ ಪ್ರದೇಶವನ್ನು ಹಬ್ಬಿ ಮನೆ, ಮರಗಳನ್ನು ನಾಶಪಡಿಸುತ್ತಿತ್ತು. ಆದರೆ ಇದಕ್ಕೆ ಆಸ್ಪದ ನೀಡದ ರೈತ ತಕ್ಷಣವೇ ಧೈರ್ಯ ತೆಗೆದುಕೊಂಡು ಟ್ರ್ಯಾಕ್ಟರ್ನ್ನು ಹೊಳೆಯತ್ತ ಓಡಿಸಿದ್ದಾರೆ.
ಬೆಂಕಿ ಧಗ ಧಗ ಉರಿದರೂ ಅವರು ಧೃತಿಗೆಡದೆ ಹೊಳೆಯವರೆಗೂ ಟ್ರ್ಯಾಕ್ಟರ್ ಓಡಿಸಿದ್ದಾರೆ. ಬಳಿಕ ಹೊಳೆಯಲ್ಲಿ ಟ್ರ್ಯಾಕ್ಟರ್ನಿಂದ ಕೆಳಕ್ಕೆ ಜಿಗಿದಿದ್ದಾರೆ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿ ಹೋಗಿದೆ.
20 ನಿಮಿಷಗಳಲ್ಲಿ ಈ ಘಟನೆ ನಡೆದು ಹೋಗಿದೆ. ಇದರಿಂದ ಯಂಕಪ್ಪ ಅವರಿಗೆ ರೂ.30 ಸಾವಿರ ನಷ್ಟವಾಗಿದ್ದು, ಸರ್ಕಾರ ಪರಿಹಾರ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
source: www.thenewsminute.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.